Total Pageviews

Thursday, January 24, 2013

ಗೋಮಾತೆಗೆ ಬಣ್ಣ ಬಳಿಯಬೇಕೆ?

ಸಂಕ್ರಾಂತಿ ಹಬ್ಬ ಕಳೆಯಿತು.  ಹಬ್ಬದ ಹಲವಾರು ಆಚರಣೆಗಳಲ್ಲಿ  ಗೋ-ಪೂಜೆಯೂ ಒಂದು.  ಜನವರಿ ೧೪ ನೇ    ತಾರೀಕಿನಂದು ಸಂಕ್ರಾಂತಿ ಹಬ್ಬಕ್ಕೆ ಸಿಂಗಾರಗೊಂಡ  ಹಸು ಗಣರಾಜ್ಯೋತ್ಸವ ಹತ್ತಿರ ಬರುತ್ತಿದ್ದರೂ ಇನ್ನೂ ಬಣ್ಣ ಮೆತ್ತಿಕೊಂಡೇ ಇದೆ.

ಬಣ್ಣಬಣ್ಣದ  ಬಟ್ಟೆ ತೊಟ್ಟು   ಸಂಭ್ರಮಿಸುವ ನಾವು,  ಗೋಮಾತೆಗೆ  ಬಣ್ಣ ಬಳಿಯುವುದು  ಎಷ್ಟು ಸರಿ? ಬಣ್ಣಗಳಲ್ಲಿ ಬಳಸಲಾಗುವ  ಸೀಸ, ಕ್ಯಾಡ್ಮಿಯಂ ಇತ್ಯಾದಿಗಳ ಲವಣಗಳು ಚರ್ಮಕ್ಕೆ  ಹಾನಿಕಾರಕ.  ಮನುಷ್ಯರ ಸಂಭ್ರಮಕ್ಕೆ ಮೂಕ  ಪ್ರಾಣಿ   ಎಷ್ಟು ಹಿಂಸೆ ಪಡುತ್ತಿದೆಯೋ?



ಹೇ ...ಕಳ್ಳೀ ...


ಮೊನ್ನೆ ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಏರಿದೆವು. ಅಲ್ಲಿಂದ ಉತ್ತನಹಳ್ಳಿಯ ಕಡೆಗೆ ಬೆಟ್ಟದ ಮಧ್ಯೆ  ಕಾಡಿನ ನಮ್ಮ ನಿಸರ್ಗ ಚಾರಣ. ಉತ್ತನಹಳ್ಳಿಯಲ್ಲಿ  'ತ್ರಿಪುರ ಸುಂದರಿ ಜ್ವಾಲಾಮುಖಿ'ಯ  ದೇವಾಲಯವಿದೆ. ಈಕೆ, ಚಾಮುಂಡೇಶ್ವರಿಯ ತಂಗಿ ಎಂಬ ನಂಬಿಕೆ.

ಕುರುಚಲು ಕಾಡಿನ  ಈ ಚಾರಣದ ದಾರಿಯುದ್ದಕ್ಕೂ ನಮಗೆ ಕಾಣಸಿಕ್ಕಿದುದು ವಿವಿಧ ಪ್ರಭೇದದ 'ಕಳ್ಳಿ'ಯರು!!! ಕೆಂಪು, ಹಳದಿ  ಹೂವಿನಿಂದ ಕಂಗೊಳಿಸುವ ಹೂಗಳ ಜತೆಗೆ ಹಸಿರು-ಕೆಂಪು ಹಣ್ಣುಗಳನ್ನು ಹೊತ್ತಿದ್ದ 'ಕಳ್ಳಿ' ಗಿಡಗಳನ್ನು ಕ್ಯಾ ಮೆರಾದಲ್ಲಿ ಸೆರೆಹಿಡಿದೆವು.



                                  
             
ಕಳ್ಳಿ ಹಣ್ಣು