Total Pageviews

Saturday, December 25, 2010

ಕುರ್ಚಿ ಎಂದರೆ ಹೇಗಿರಬೇಕು?

ಮನುಷ್ಯರು ಇರುವ ಕಡೆಯಲ್ಲಿ ಕೂರಲು ಕುರ್ಚಿ ಬೇಕೇ ಬೇಕು.  ಕುರ್ಚಿ ಎಂದರೆ ಹೇಗಿರಬೇಕು ? ಆರಾಮದಾಯಕವಾಗಿರಭೆಕು, ನೋಡಲು ಅಕರ್ಷಕವಾಗಿರಬೇಕು, ಸ್ಥಳಕ್ಕೆ ಹೊಂದುವಂತಿರಬೇಕು.....ಇತ್ಯಾದಿ.

ತಾತನ ಕಾಲದ ಮರದ ಕುರ್ಚಿ, ಒರಗುವ ಕುರ್ಚಿ, ತೂಗಾಡುವ ಕುರ್ಚಿ, ಬೆತ್ತದ ಕುರ್ಚಿ, ವಾಲುವ ಕುರ್ಚಿ ಮುಂತಾದುವುಗಳನ್ನೂ ಇತ್ತೀಚಿಗಿನ ವಿವಿಧ 'ಡಿಸೈನೆರ್ ಕುರ್ಚಿ' ಗಳನ್ನೂ ನೋಡಿ ಗೊತ್ತಿತ್ತು. ಕಳೆದ ವಾರ ಚೈನಾದ ಭಾಗವಾಗಿರುವ  ಮಕಾವ್ ನಲ್ಲಿ ನಾನು ಗಮನಿಸಿದ ಕುರ್ಚಿಗಳು ಹೀಗಿದ್ದುವು:

ಶಾಪಿಂಗ್ ಮಾಲ್ ಒಂದರಲ್ಲಿ ಅಲ್ಲಲ್ಲಿ 'ದೊಡ್ಡದಾದ ಹೂ ಕುಂಡ'ವನ್ನು ಜೋಡಿಸಿದ್ದರು. ಶಾಪಿಂಗ್ ಮಧ್ಯ ವಿರಾಮ ಬೇಕಾದರೆ, ಜನ ಇದನ್ನು ಕೂರಲು ಕಟ್ಟೆಯಂತೆ ಬಳಸುತಿದ್ದರು. ಈ ಫ್ಲವರ್ ಪಾಟ್ ನ್ನು  'ಚಯರ್ ಪಾಟ್' ಅನ್ನೋಣವೆ?  





ಈ ಅಂಗೈನಲ್ಲೂ ಕೂರಬಹುದು!

 







Friday, December 24, 2010

Merry Christmas- Decoration at Macao, China

During last 4 days, I was at Macau, a part of the Republic of China, on a business trip. Macau  also called as Macao and it is situated at appr. 60 kilometres  towards  southwest of Hong Kong.  
From Bangalore airport, it takes 6 hours to reach Hong Kong. From Hong Kong, it is followed by an hour of journey by ferry to reach Macao Island.  
Though the weather at Macao was quite cold, our team ensured that enough time was dedicated for moving around.  It is really a wonderful experience for a tourist to enjoy the beauty of the city, especially when it is getting decked up for Christmas.
Some of the  pictures of Christmas decoration at Macao:

 At Hotel Westin, Macao
                                
 At Macao Tower



          At Market road, Macao


  At Hong Kong Airport

Tuesday, November 23, 2010

ಪುಸ್ತಕನೋಟ - ಕರ್ವಾಲೋ

ಪೂರ್ಣ ಚಂದ್ರ ತೇಜಸ್ವಿಯವರ ಅದ್ಭುತ ಕತೆಗಾರಿಕೆಯ ಕೃತಿ 'ಕರ್ವಾಲೋ'.

ಅದನ್ನು ಓದುತ್ತಾ ಹೋದಂತೆ ಪಶ್ಚಿಮ ಘಟ್ಟದ ನಿಸರ್ಗ ಸಿರಿ ಅನಾವರಣಗೊಳ್ಳುತ್ತದೆ. ಜೀವ ಜಾಲದ  ವಿಸ್ಮಯಗಳು, ಜೀವ ವೈವಿಧ್ಯಗಳ ಸಂಬಂಧಗಳು, ಜೀವ ವಿಕಾಸದ ಪಥದಲ್ಲಿ ಕಳಚಿ ಹೋದ ಕೊಂಡಿಯನ್ನು  ಹುಡುಕುವ ಪ್ರಯತ್ನ, ಇತ್ಯಾದಿಗಳ  ಮಿಶ್ರಣ ಈ ಕಾದಂಬರಿಯ ಹೂರಣ.

ವಿದ್ಯಾವಂತ ಕೃಷಿಕನಾಗಿದ್ದೂ , ಗ್ರಾಮೀಣ  ಜೀವನದ ಮೇಲೆ ಅಪಾರ ಆಸಕ್ತಿಯಿದ್ದರೂ, ಕೃಷಿಯಲ್ಲಿ ಹೆಚ್ಚಿನ ಯಶಸ್ಸು ಕಾಣದೆ , ತೋಟವನ್ನು ಮಾರಿ ಪಟ್ಟಣಕ್ಕೆ  ಹೋಗಬೇಕೆಂದು, ಕಥಾನಾಯಕ ಹವಣಿಸುತ್ತಾನೆ. ಈ ಸಂದರ್ಭದಲ್ಲಿ, ಆತನಿಗೆ ಮೇಧಾವಿ ಸಂಶೋಧಕ 'ಕರ್ವಾಲೋ ' ಅವರ  ಪರಿಚಯವಾಗುತ್ತದೆ. 

ಆವರೊಂದಿಗೆ ನಿಕಟ ಸಂಪರ್ಕದಲ್ಲಿರುವ ಮಂದಮತಿ ಮಂದಣ್ಣನನ್ನು ಕಂಡು ಕುತೂಹಲಿಯಾಗುತ್ತಾನೆ. ಈತನೊಂದಿಗೆ ಕರ್ವಾಲೋ ರವರ ಸ್ನೇಹಕ್ಕೆ ಕಾರಣವೇನೆಂದು  ಪ್ರಶ್ನಿಸುತ್ತಾನೆ. ಮಂದಣ್ಣನಿಗೆ  ಜೀವ ಪ್ರಭೇದಗಳನ್ನು ಗುರುತಿಸುವ ಪ್ರತಿಭೆಯಿದೆ,ಅದರಿಂದಾಗಿ ತನ್ನ ಸಂಶೋಧನೆಗೆ  ಸಹಾಯವಾಗುತ್ತದೆ,  ಎನ್ನುತ್ತಾರೆ ಕರ್ವಾಲೋ.

ಒಂದು ದಿನ ಕರ್ವಾಲೊ ಅವರು, ಮಂದಣ್ಣನು ಕಾಡಿನಲ್ಲಿ ಒಂದು ವಿಧವಾದ 'ಹಾರುವ ಒತಿಯನ್ನು' ನೋಡಿದ್ದನೆಂದೂ, ಈ ಪ್ರಭೇದವು ಜೀವ ವಿಕಾಸದ ಹಾದಿಯಲ್ಲಿ ಕಳಚಿಹೋದ ಕೊಂಡಿಯೆಂದು ಇದುವರೆಗೆ ನಂಬಲಾಗಿತ್ತೆಂದು ಹೇಳಿದರು. 

ಕಥನಾಯಕನೂ  ಕರ್ವಾಲೋ ಅವರ ತಂಡದೊಂದಿಗೆ ಜತೆಗೂಡಿ, ಕಾಡಿನಲ್ಲಿ 'ಹಾರುವ ಒತಿಯನ್ನು' ಅರಸುತ್ತ ಅಲೆದಾಡುವ ರೋಚಕ ಅನುಭವಗಳು ಹಾಗೂ ವೈಚಾರಿಕ ವಿಶ್ಲೇಷಣೆಗಳು  ಓದುಗರನ್ನು, ಪ್ರಕೃತಿಯ ಬಗ್ಗೆ ಚಿಂತನೆಗೆ ಹಚ್ಚುತ್ತವೆ.

Monday, November 22, 2010

ಕಸದಿಂದ ಅದ್ಭುತ ಸೃಷ್ಟಿ.. ರಾಕ್ ಗಾರ್ಡನ್

'ಕಸದಿಂದ ರಸ' ಎಂಬ ಮಾತನ್ನು ರುಜುವಾತುಗೊಳಿಸುವ ಹಲವರು ಪ್ರಯತ್ನಗಳನ್ನು ನಮ್ಮ  ಸುತ್ತುಮುತ್ತಲು ಗಮನಿಸಿರುತ್ತೇವೆ.

ಕಸದಿಂದಲೇ ಸೃಷ್ಟಿಸಿರುವ ಅದ್ಭುತ ಚಂಡಿಘಢದ 'ರಾಕ್ ಗಾರ್ಡನ್'. ಅದೂ ಅಂತಿಂಥ ಕಸವಲ್ಲ,  ಕೈಗಾರಿಕೆಗಳಲ್ಲಿ  ನಿರುಪಯುಕ್ತವಾದ ಪದಾರ್ಥಗಳು, ಒಡೆದ ಗಾಜಿನ ಚೂರುಗಳು, ಮಡಿಕೆ ಕುಡಿಕೆಗಳು, ಪೈಪುಗಳು, ಬೆಣಚು ಕಲ್ಲುಗಳು ಇತ್ಯಾದಿ 'ಕಸಗಳು' ಇಲ್ಲಿ ಗಾರೆಯೊಂದಿಗೆ ಸೇರಿ ಸುಂದರವಾದ ವಿವಿಧ ಪ್ರಾಣಿ-ಪಕ್ಷಿ, ಬೊಂಬೆ, ಗೋಪುರಗಳಾಗಿ ಕಂಗೊಳಿಸಿವೆ.

ಗಾರ್ಡನ್ ಎಂದಾಕ್ಷಣ ಬಣ್ಣ-ಬಣ್ಣದ ಹೂವುಗಳು, ಹಸಿರು ಹುಲ್ಲು ಹಾಸುಗಳು ನೆನಪಿಗೆ ಬರುತ್ತವೆ. ಆದರೆ 'ರಾಕ್ ಗಾರ್ಡನ್' ಭಿನ್ನವಾದುದು. ಇಲ್ಲಿ ತಾಂತ್ರಿಕತೆಯೊಂದಿಗೆ ಕ್ರಿಯಾಶೀಲತೆಯು  ಮೇಳೈಸಿದೆ.  ಈ 'ಗಾರ್ಡನ್ ' ನ ಕಣಿವೆಗಳಲ್ಲಿ ನಡೆದಾಡುವುದು ಒಂದು ಅವಿಸ್ಮರಣೀಯ ಅನುಭವ. ಇದರ ರೂವಾರಿ 'ನೇಕ್ ಚಂದ್' ಎಂಬವರು.



Monday, November 15, 2010

ಚಾಮುಂಡಿ ಬೆಟ್ಟದಲ್ಲಿ ಚಾರಣ..

ಮೈಸೂರಿನಲ್ಲಿ ನೆಲೆಸಿ ಸುಮಾರು ಇಪ್ಪತ್ತು ವರುಷಗಳಾದರೂ, ಚಾಮುಂಡೇಶ್ವರಿ ದೇವಾಲಯವನ್ನು ಹಲವಾರು ಬಾರಿ ಸಂದರ್ಶಿಸಿದ್ದರೂ,  ಇ ದುವರೆಗೂ ಬೆಟ್ಟದಲ್ಲಿ ಚಾರಣ ಮಾಡಿರಲಿಲ್ಲ. ಕಳೆದ ಭಾನುವಾರದಂದು, ಯೂಥ್ ಹಾಸ್ಟೆಲ್ ನವರ ತಂಡದೊಂದಿಗೆ ಸೇರಿ, ಪ್ರಥಮ ಬಾರಿಗೆ ಚಾರಣ ಮಾಡಿದ ಅನುಭವ ಹೀಗಿದೆ.

ಹಿತವಾದ ವಾತಾವರಣದಲ್ಲಿ,ಪುಟ್ಟ ಕಾಲುದಾರಿಗಳಲ್ಲಿ, ಅನುಭವಿ ಚಾರಣಿಗರ ಬೆಂಬಲದಲ್ಲಿ, ಹೆಜ್ಜೆ ಹಾಕಿದ ನಮಗೆ ಸಮಯದ ಪರಿವೆಯೂ ಇರಲಿಲ್ಲ, ದಣಿವೂ ಆಗಲಿಲ್ಲ. ಸುಮಾರು ಮೂರು ಗಂಟೆಗಳ ಕಾಲ ಚಾರಣ ನಡೆಸಿ, ಅಲ್ಲೊಂದು ವೀಕ್ಷಣಾ ಗೋಪುರವನ್ನು ತಲಪಿದೆವು. ಆಮೇಲೆ ಬೆಟ್ಟದ ಇನ್ನೊಂದು ಬದಿಯಿಂದ, ಮೆಟ್ಟಿಲುಗಳ ಮೂಲಕ ಕೆಳಗಿಳಿದೆವು.    



  
ಮುಂಜಾವಿನ ಮಂಜಿನಲ್ಲಿ
ಚಾಮುಂಡಿ ಬೆಟ್ಟದ ಸೊಗಸು..   

 
                                                

 ಮಾರ್ಗವಿಲ್ಲದ ಕಡೆ ನಡೆದಲ್ಲೇ ದಾರಿ














ಅಚ್ಚುಕಟ್ಟಾದ ವ್ಯವಸ್ಥೆ, ಸ್ನೇಹಮಯಿ ಸಹ ಚಾರಣಿಗರು, ರುಚಿಕಟ್ಟಾದ ತಿಂಡಿ-ತಿನಿಸುಗಳು -ಇವಕ್ಕೆಲ್ಲ ಮೇಳೈಸಿದ ಪ್ರಕೃತಿ ಸೌಂದರ್ಯ.   ಭಾನುವಾರವನ್ನು  ಸಂಪನ್ನಗೊಳಿಸಲು ಇನ್ನೇನು ಬೇಕು ? 

ಮೈಸೂರಿನಲ್ಲಿ ತಾಜಾ 'ತಾಜ್ ಮಹಲ್' ?

ಮೈಸೊರಿನಲ್ಲಿ  ಭಾನುವಾರದ ಸಂಜೆ ಕಳೆಯಲು ಹಲವಾರು ದಾರಿಗಳಿವೆ. ದೊಡ್ಡಕೆರೆ ಮೈದಾನದಲ್ಲಿರುವ, ದಸರಾ ವಸ್ತು ಪರ್ದರ್ಶನಕ್ಕೆ ಭೇಟಿ ಕೊಡುವುದೂ ಅವುಗಳಲ್ಲೊಂದು.  ನಿನ್ನೆ ವಸ್ತು ಪ್ರದರ್ಶನದ ಮೈದಾನದಲ್ಲಿ, ಸ್ವಲ್ಪ ಸುತ್ತಾಡಿ , ಸ್ವಲ್ಪ ತಿಂದು, ಹರಟುತ್ತಾ  ನಡೆಯುವಾಗ, ಇದ್ದಕ್ಕಿದ್ದಂತೆ 'ತಾಜಾ ತಾಜ್ ಮಹಲ್' ನ ದರ್ಶನವಾಯಿತು! 



ಪ್ರತಿ ವರುಷವೂ, ಏನಾದರೂ ವಿಶಿಷ್ಟವಾದುದನ್ನು ಮೂಡಿಸುವ ಕಲಾವಿದರಿಗೆ ಥಾಂಕ್ಸ್!



 
                                                            ಮೈಸೂರಿನಲ್ಲಿರುವ  'ತಾಜ್ ಮಹಲ್ '  ಹೀಗಿದೆ ನೋಡಿ.

   





ಕಳೆದ ಜನವರಿಯಲ್ಲಿ ಆಗ್ರಾಕ್ಕೆ ಹೋಗಿದ್ದೆ.

ಇದು 'ತಾಜ್ ಮಹಲ್' ನ ಮೋಡಿ.  

Saturday, November 6, 2010

ಪವಡಿಸಿದಾ ಬುದ್ಧ ಪರಮಾತ್ಮ, 'ವಾಟ್ ಫೊ'ನಲ್ಲಿ..

ಥೈಲಾಂಡ್ ನ ರಾಜಧಾನಿಯಾದ ಬ್ಯಾಂಕಾಕ್ ಅರಮನೆಯ ಅನತಿ ದೂರದಲ್ಲಿ ಕಂಗೊಳಿಸುತ್ತದೆ, 'ವಾಟ್ ಫೊ' ಎಂದು ಕರೆಯಲ್ಪಡುವ ಬುದ್ಧನ ದೇವಾಲಯ. ಇಲ್ಲಿನ ಬಹುದೊಡ್ಡದಾದ ಹಾಗೂ ಸುಂದರವಾದ   ಬುದ್ಧನ ವಿಗ್ರಹವನ್ನು ಮಲಗಿರುವ ಭಂಗಿಯಲ್ಲಿ ಕೆತ್ತಲಾಗಿದೆ.

ವಿಗ್ರಹವು  ೪೬ ಮೀಟರ್ ಉದ್ದ ಹಾಗು ೧೫ ಮೀಟರ್ಎತ್ತರವಿದೆಯಂತೆ. ವಿಗ್ರಹಕ್ಕೆ ಸಂಪೂರ್ಣವಾಗಿ  ಚಿನ್ನದ ಕವಚವಿದೆ.





ಥೈಲಾಂಡ್ ನಲ್ಲೆ ಅತಿ ದೊಡ್ಡದಾದ ಈ ದೇವಾಲಯವನ್ನು ೧೭೮೮ ರಲ್ಲಿ ಕಟ್ಟಿ, ಆಮೇಲೆ ದೊರೆ ರಾಮ-೩ ನ ಕಾಲದಲ್ಲಿ ಅಭಿವೃದ್ಧಿಗೊಳಿಸರಂತೆ.  








ಇಲ್ಲಿನ  ಒಂದು ಕಡೆ ಸಾಲಾಗಿ ಜೋಡಿಸಿರುವ ಪುಟ್ಟ ಪುಟ್ಟ ಹುಂಡಿಗಳಿವೆ. ಅಲ್ಲಿ  ಒಬ್ಬರು ಮಹಿಳೆ, ಪುಟ್ಟ ಪುಟ್ಟ ತಟ್ಟೆಗಳಲ್ಲಿ ನಾಣ್ಯಗಳನ್ನು ಸುರುವಿ ಕೊಡುತಿದ್ದರು. ಕೆಲವರು, ಥೈಲಾಂಡ್ ನ ಹಣವಾದ 'ಬಾಟ್'ನ್ನು ಕೊಟ್ಟು, ನಾಣ್ಯಗಳನ್ನು ಪಡೆದುಕೊಂಡು, ಆ ಹುಂಡಿಗಳಿಗೆ ತಲಾ ಒಂದರಂತೆ ನಾಣ್ಯವನ್ನು ಹಾಕುತಿದ್ದರು.




ಇದರ ಉದ್ದೇಶ ಮತ್ತು  ಔಚಿತ್ಯ ಏನೆಂದು  ಆಕೆಯನ್ನು ಇಂಗ್ಲಿಷ್ ನಲ್ಲಿ  ಕೇಳಿದೆ. ಥಾಯಿ ಭಾಷೆಯಲ್ಲಿ ಏನೋ ಅಂದಳು. ನನಗೆ ಅರ್ಥವಾಗಲಿಲ್ಲ.   ಗುಂಪಿನಲ್ಲಿ ಗೋವಿಂದ ಎಂದು  ನಾನೂ, ಉಳಿದವರನ್ನು ಅನುಸರಿಸಿದೆ.








"ಪವಡಿಸೋ ಪರಮಾತ್ಮ ಶ್ರೀವೆಂಕಟೇಶ.." ಹಾಡನ್ನು ಗುನುಗಿ,  ಶ್ರೀರಂಗಪಟ್ಟಣದ "ಮಲಗಿರುವೆಯಾ ರಂಗನಾಥ.." ಹಾಡನ್ನು ಸ್ಮರಿಸಿ, ಮಲಗಿರುವ ಬುದ್ಧನ ಅದ್ಭುತ ರೂಪವನ್ನು ಕಣ್ತುಂಬಿಸಿಕೊಂಡೆ.             

Wednesday, October 27, 2010

ಸೆಂಟುಸ ದಲ್ಲಿ ಸಾರಿಗೆ ಬಸ್ ....ಮೊನೋ ರೈಲ್...

ಕಳೆದ ಎಪ್ರಿಲ್ ತಿಂಗಳಲ್ಲಿ, ಸಿಂಗಾಪುರದ ಸೆಂಟೋಸ ದ್ವೀಪದಲ್ಲಿ, ಮೂರು ದಿನಗಳ ಮಟ್ಟಿಗೆ ವಾಸವಾಗಿದ್ದೆ.  ಅಲ್ಲಿನ  ಹಲವಾರು ಪ್ರೇಕ್ಷಣೀಯ ವಿಚಾರಗಳ ಜತೆಗೆ , ಪ್ರವಾಸಿಗಳಿಗೆ ಒದಗಿಸಲಾದ ಸಾರಿಗೆ ಸೌಲಭ್ಯ ನನಗೆ ಅದ್ಬುತವೆನಿಸಿತು.

ನಾವು ಉಳಕೊಂಡಿದ್ದ ಹೋಟೆಲ್ ನಿಂದ ಅನತಿ ದೂರದಲ್ಲಿದ್ದ 'ಅಂಡರ್ ವಾಟರ್ ವರ್ಲ್ಡ್' ನೋಡಲು ಹೊರಟೆವು. "ಇಲ್ಲೆ ಪಕ್ಕದಲ್ಲಿ ಬಸ್ ನಿಲ್ದಾಣ ಇದೆ, ನೀವು ಟಿಕೆಟ್ ಪಡಕೊಳ್ಳಬೇಕಾಗಿಲ್ಲ, ಈ ಹೋಟೆಲ್ ನ 'ಪಿಂಕ್ ಕಾರ್ಡ್' ಇದ್ದರೆ ಸಾಕು,ಮೂರು ದಿನಗಳ ಕಾಲ ಸೆಂಟೋಸದಲ್ಲಿ ಎಲ್ಲಿಗೆ ಬೇಕಾದರು ಸುತ್ತಾಡಬಹುದು. ನೀವು ಹೋಗಬೇಕಾದ ಜಾಗಕ್ಕೆ, 'ರೆಡ್ ಲೈನ್ ಅಥವಾ ಬ್ಲೂ ಲೈನ್' ಬಳಸಬಹುದು" ಎಂದಳು, ಹೊಟೆಲ್ ನ ಸ್ವಾಗತಕಾರಿಣಿ.

ಹೋಟೆಲ್ ನಿಂದ ಹೊರಬಂದು ಬಸ್  ನಿಲ್ದಾಣಕ್ಕೆ ಬಂದೆವು. ಕೆಂಪು ಹಾಗು ನೀಲಿ ಲೈನ್ ಗಳೆಂದು ಗುರುತಿಸಲ್ಪಡುವ ಬಸ್ ಗಳ ನಿಲುಗಡೆಗಾಗಿ, ಪ್ರತ್ಯೇಕ ಜಾಗವಿತ್ತು. ಮಾರ್ಗದಲ್ಲಿ ಹಳದಿ ಬಣ್ಣದ ಬಸ್ ಗಳು,ಓಡಾಡುತಿದ್ದುವು. ಅವುಗಳ ಲ್ಲಿ ನಂಬರ್ ನ ಬದಲು 'ರೆಡ್' ಅಥವಾ 'ಬ್ಲೂ' ಎಂದಷ್ಟೇ ನಮೂದಿಸಲಾಗಿತ್ತು. ಬಸ್ ಬಂತು, ಹತ್ತಿ ಕುಳಿತೆವು. ವಾವ್! 'ಟಿಕೆಟ್, ಟಿಕೆಟ್ ಎಂದು ಕಿರುಚುವ ಕಂಡಕ್ಟರ್ ಇಲ್ಲ, ಚಿಲ್ಲರೆ ಇಲ್ಲವೆಂದು  ಚಿಂತೆ ಬೇಕಾಗಿಲ್ಲ, ಬಸ್ ನಂಬರ್ ನೆನಪಿಡುವ ಅವಶ್ಯಕತೆಯಿಲ್ಲ, ಸದ್ದು- ಗದ್ದಲ, ಕಸ-ಕಡ್ಡಿ, ನೂಕು-ನುಗ್ಗಲು, ಪರಸ್ಪರ ಬೈಗಳು, ಮಳೆ-ಬಿಸಿಲಿಗೆ ಗಂಟೆಗಟ್ಟಲೆ ಕಾಯುವ ಪ್ರಮೇಯವಂತೂ ಇಲ್ಲವೇ ಇಲ್ಲ. ಎಲ್ಲವೂ ಅಚ್ಚುಕಟ್ಟು.









 ಬಸ್ ನಿಲ್ದಾಣ







ಸೆಂಟೋಸದ ಇನ್ನೊಂದು ಪ್ರಮುಖ ಸಾರಿಗೆ ಅಲ್ಲಿನ 'ಮೊನೊ ರೈಲ್'. ಇವುಗಳು ನೆಲಮಟ್ಟಕ್ಕಿಂತ ಎತ್ತರದಲ್ಲಿರುವ ಸಿಂಗ್ ಲ್ ಲೈನ್ ಟ್ರಾಕ್ ನಲ್ಲಿ ಓಡಾಡುತ್ತಿರುತ್ತವೆ. ಇದನ್ನು ೧೯೬೨ರಲ್ಲಿ ಉದ್ಘಾಟಿಸಲಾಯಿತಂತೆ. ಒಟ್ಟು ೧೪ ಮೊನೊರೈಲ್ ಗಳು ಇದ್ದು , ಅವು ಸೆಂಟೋಸದ ಎಲ್ಲ ಮುಖ್ಯ ತಾಣಗಳಿಗೆ ಸಂಪರ್ಕ ಹೊಂದಿವೆ. ಇವುಗಳು ಇನ್ನೊಂದು ವಿಶೇಷತೆಯೆಂದರೆ, ಸೆಂಟೋಸದಲ್ಲಿ ತಂಗಿರುವ ಪ್ರವಾಸಿಗಳು ಎಷ್ಟು ಸಲ ಬೇಕಾದರೂ  ಪ್ರಯಾಣಿಸಬಹುದು, ಟಿಕೆಟ್ ಕೊಳ್ಳುವ ರಗಳೆಯಿಲ್ಲದೆ. ಜತೆಗೆ, ೫ ನಿಮಿಷಕ್ಕೊಮ್ಮೆ ಮೊನೊರೈಲ್ ಗಳು ಬರುತ್ತಾ ಇರುತ್ತವೆ. ರೈಲ್ ನ  ಬೋಗಿ ಪುಟ್ಟದಾಗಿದ್ದರೂ, ನೂಕು ನುಗ್ಗಲು ಇರುವುದಿಲ್ಲ. ಕಾಯಬೇಕಾಗಿಲ್ಲ.









ಹಳಿಯ ಮೇಲೆ  ಮೊನೋ  ರೈಲ್







ನಮ್ಮಲ್ಲಿ ಯಾವಾಗಲೂ ಜನರಿಂದ ಗಿಜಿಗುಟ್ಟುವ ಬಸ್-ರೈಲ್ ನಿಲ್ದಾಣಗಳು,   ಕಿರಿಚುವ ಪ್ರಯಾಣಿಕರು, ಗದರುವ ನಿರ್ವಾಹಕರು, ತಿನಿಸು ಮಾರುವವರು, ಭಿಕ್ಷೆ ಬೇಡುವವರು...ಇತ್ಯಾದಿ  ಇಲ್ಲದಿದ್ದರೆ ಬಸ್ ಪ್ರಯಾಣ ಅಪೂರ್ಣ ಎಂಬ ಅಚಲ ನಂಬಿಕೆ ಹೊಂದಿದ್ದ ನನಗೆ, ಇಲ್ಲಿಯ   ಸಾರಿಗೆ ವ್ಯವಸ್ಥೆ ಆದರ್ಶಪ್ರಾಯ ಎನಿಸಿತು.

Wednesday, October 13, 2010

ವೈಪರ್ ದ್ವೀಪ....ಮಾರ್ಗದರ್ಶಕ ಸಂಜಯ್

ಅಂಡಮಾನ್ ನ ಪೋರ್ಟ್  ಬ್ಲೈರ್ ನಿಂದ  ಕೇವಲ  ೨ ಕಿ.ಮೀ. ದೂರದಲ್ಲಿದೆ, ಬಹಳ ಸುಂದರವಾದ   'ವೈಪೆರ್ ದ್ವೀಪ'. ಪೊರ್ಟ್ ಬ್ಲೈರ್ ನ' 'ಫಿಯೊನಿಕ್ಸ್ ' ಹಾರ್ಬರ್ ನಿಂದ  ಪುಟ್ಟ ಹಡಗುಗಳ  ಮೂಲಕ ಸಮುದ್ರದಲ್ಲಿ ೧೫ ನಿಮಿಷ ಪ್ರಯಾಣ ಮಾಡಿದರೆ ವೈಪರ್  ದ್ವೀಪ ಸಿಗುತ್ತದೆ.

ಬ್ರಿಟಿಷರ ಕಾಲದಲ್ಲಿ, ಸೆಲ್ಲುಲಾರ್ ಜೈಲ್ ನ್ನು ಕಟ್ಟಿಸುವ ಮೊದಲು, ಅಪಾಯಕಾರಿ ಕೈದಿಗಳನ್ನು ಇಲ್ಲಿ ಇರಿಸಲಾಗುತಿತ್ತು. ಸೆಲ್ಲುಲರ್ ಜೈಲ್  ನ್ನು ಕಟ್ಟಿಸಿದ ನಂತರ ಈ ದ್ವೀಪದಲ್ಲಿ  ಮಹಿಳಾ ಕೈದಿಗಳನ್ನು ಇರಿಸಲಾಗಿತ್ತು.   'ವೈಪೆರ್' ಎಂಬ ಹೆಸರಿನ ಬ್ರಿಟಿಶ್ ನೌಕೆಯು  ಈ ದ್ವೀಪದ ಹತ್ತಿರದಲ್ಲಿ ಅಪಘಾತಕ್ಕೆ ಒಳಗಾಗಿತ್ತಂತೆ, ಹಾಗಾಗಿ, ಈ ದ್ವೀಪವನ್ನು ಅದೇ ಹೆಸರಿನಿಂದ  ಕರೆಯಲಾಯಿತು. ಈ ದ್ವೀಪದಲ್ಲಿ, 'ವೈಪೆರ್' ಎಂಬ ವಿಷಪೂರಿತ ಹಾವುಗಳು  ಇರುವುದರಿಂದಲೂ ಹೆಸರಿಗೆ ಅನ್ವರ್ಥವಾಗಿದೆಯೆಂದು ಕೆಲವರ ಅಭಿಪ್ರಾಯವಿದೆ.

ಈ ದ್ವೀಪದಲ್ಲಿ, ಹಳೆ ಜೈಲ್ ನ ಅವಶೇಷಗಳು, ಕೋರ್ಟ್ ರೂಮ್ ಹಾಗು ದಿಬ್ಬದ ತುದಿಯಲ್ಲಿ 'ರೆಡ್ ಗಲ್ಲೊಸ್' ಎನ್ದು ಕರೆಯಲ್ಪಡುವ 'ಫಾಸಿ ರೂಮ್' ಇದೆ. ಗಲ್ಲಿಗೆ ಹಾಕುವ ಈ ಕೆಂಬಣ್ಣದ  ಮರದ ತೊಲೆಯನ್ನು, ಅಂಡಮಾನ್ ನಲ್ಲಿ ಮಾತ್ರ ದೊರೆಯುವ 'ಪಡೊಕು' ಮರದಿಂದ  ತಯಾರಿಸಿದ್ದಾರೆ . ಈ ಮರ ೨-೩ ಸಾವಿರ ವರ್ಷಗಳಾದರೂ, ಕೆಡುವುದಿಲ್ಲವಂತೆ.

ಪಡೊಕು ಮರಗಳನ್ನು ಕಡಿದು ಸಂಸ್ಕರಿಸಿ  ಸಾಗಿಸಲೆಂದೇ, ಬ್ರಿಟಿಶರು,  'ಚತ್ತಮ್  ದ್ವೀಪದಲ್ಲಿ' ೧೫೦ ವರ್ಷಗಳ ಹಿಂದೆ  ಸ್ಥಾಪಿಸಿದ, 'ಚತ್ತಂ  ಸೊ ಮಿಲ್ಲ್ಸ್' ಎಂಬ  ಕಾರ್ಖಾನೆ  ಇಂದಿಗೂ ಸುಸ್ಥಿತಿಯಲ್ಲಿದ್ದು,  ಕಾರ್ಯ ನಿರತವಾಗಿದೆ.  ಇದು ಏಷಿಯಾ ಖಂಡದಲ್ಲೇ ಅತಿ ದೊಡ್ಡದಾದ ಮರ ಸಿಗಿಯುವ  ಕಾರ್ಖಾನೆಯಂತೆ.

ವೈಪರ್ ದ್ವೀಪದಲ್ಲಿ 'ಶೇರ್ ಆಲಿ'ಯ ಹೆಸರು ಶಾಶ್ವತ. ಬ್ರಿಟಿಷರ ಹಿಂಸೆಯಿಂದ ರೋಸಿಹೋಗಿದ್ದ ಆತ,ಆಗಿನ ವೈಸ್ ರಾಯ್ ಆಗಿದ್ದ 'ಲಾರ್ಡ್ ಮಾಯೋ' , ಅಂಡಮಾನ್ ನ  ಹಾರಿಯಟ್ ಬೆಟ್ಟಕ್ಕೆ ಪ್ರಕೃತಿ ವೀಕ್ಷಣೆಗೆ ಬಂದಿದ್ದಾಗ  ಕೊಲೆಗೈದನಂತೆ. ಆತನನ್ನು   ವೈಪೆರ್ ದ್ವೀಪದಲ್ಲಿ  ಗಲ್ಲಿಗೇರಿಸಿದರು.  ಸುನಾಮಿಯ ಅರ್ಭಟಕ್ಕೆ, ಇಲ್ಲಿನ  ಕಟ್ಟಡಗಳು ಹಾನಿಗೊಂಡಿವೆ. ಆಳಿದುಳಿದ ಕಟ್ಟಡಗಳು ಇಲ್ಲಿ ನಡೆದ  ಪೈಶಾಚಿಕ ಕೃತ್ಯಗಳಿಗೆ ಸಾಕ್ಷಿಯಾಗಿ ನಿಂತಿವೆ. 

ಮಾರ್ಗದರ್ಶಕ ಸಂಜಯ್ ಹೇಳುವ ಪ್ರಕಾರ, ಈ ದ್ವೀಪದಲ್ಲಿ  ಪ್ರೇಕ್ಷಣೀಯವಾದದ್ದು ಏನು ಇಲ್ಲ, ಆದರೆ, ಪ್ರತಿಯೊಬ್ಬ ಹಿಂದುಸ್ತಾನಿ ಪ್ರಜೆ ಗೌರವದಿಂದ ನಮನ ಸಲ್ಲಿಸಬೇಕಾದ  'ಫಾಸಿಗಂಬ' ವಿದೆ.  ಈ ದ್ವೀಪದಲ್ಲಿ, ಮೂರು ವಿಧದ ಶಿಕ್ಷೆ  ವಿಧಿಸಲಾಗುತಿತ್ತು. ಕೈದಿಗಳನ್ನು ಕತ್ತಲೆ ಕೊಣೆಯಲ್ಲಿ ದಿನಗಟ್ಟಲೆ ಕೂಡಿ ಹಾಕುವುದು, ಹಾವುಗಳು ಹರಿದಾಡುವ ಕಾಡಿನಲ್ಲಿ ಮರಕ್ಕೆ ಕಟ್ಟಿ ಹಾಕುವುದು, ಕೊನೆಯದಾಗಿ ಗಲ್ಲು...!

ತುಂಬಾ ಭಾವಪೂರ್ಣವಾಗಿ, ಹಿಂದಿ ಭಾಷೆಯಲ್ಲಿ  ನಿರರ್ಗಳವಾಗಿ ಮಾತನಾಡುವ ಸಂಜಯ್, ಸುಮಾರು  ೨೦-೨೫ ವಯಸ್ಸಿನ ಯುವಕ.

ಪ್ರವಾಸಿಯೊಬ್ಬರು 'ಇಲ್ಲಿ ಏನಿದೆ,  ಒಂದು ಮರದ ತೊಲೆ ನೋಡೋಕೆ ಅರ್ಧ ದಿನ ವೇಸ್ಟ್' ಎಂದರು.

ಅದನ್ನು ಕೇಳಿಸಿಕೊಂಡ ಸಂಜಯ್ ಖಾರವಾಗಿ ಪ್ರತಿಕ್ರಿಯಿಸಿದ "ಪ್ರೇಕ್ಷಣೀಯ ಜಾಗವನ್ನು ಬಯಸುವವರು ಈ ಶಹೀದ್ ಭೂಮಿಗೆ ಯಾಕೆ ಬರಬೇಕು?  ನಿಮ್ಮ ಊರಲ್ಲಿ ಸಾಕಷ್ಟು  ಗಿರಿಧಾಮ, ವಿಲಾಸಿ ತಾಣಗಳಿಲ್ಲವೆ?  ಇಂಥಹ ಪವಿತ್ರ ಭೂಮಿಗೆ ಬಂದು ಈ ಸ್ಥಳವನ್ನು, ಆ ಹುತಾತ್ಮರನ್ನು  ಅವಮಾನಿಸಬೇಕೆ ?  ಒಂದು  ಮಾತು ಹೇಳುತ್ತೇನೆ, ಈವತ್ತು ನಾನು-ನೀವು ಇಲ್ಲಿ ಸ್ವತಂತ್ರವಾಗಿ ಇರುವುದು ಆ ನೇಣುಗಂಬವೇರಿದ ಶಹೀದರಿಂದಾಗಿ, ನೀವು ಮಂದಿರ್, ಮಸೀದಿ , ಇಗರ್ಜಿ, ಗುರುದ್ವಾರಕ್ಕೆ ಹೋಗುತ್ತಿರಬಹುದು, ಆದರೆ, ಇದು ಅವಕ್ಕಿಂತಲು ಪವಿತ್ರ "ಎಂದ.

ಚಿಕ್ಕ ವಯಸ್ಸಿನ ಅವನ ದೇಶಪ್ರೇಮ ಹಾಗು ಸ್ಥಳ ಗೌರವವನ್ನು ಕಾಯುವ ಕಾಳಜಿ ಇಷ್ಟವಾಯಿತು. ಹಿಂತಿರುಗಿ ಬರುವಾಗ, ಅವನನ್ನು ಶ್ಲಾಘಿಸಿ ನಾನಾಗಿ ಮಾತಿಗೆಳೆದೆ. 'ಡೆಕ್ ನ ಮೇಲೆ ಚೆನ್ನಾಗಿ ಗಾಳಿ ಬರುತ್ತದೆ,ನಾನು ಅಲ್ಲಿಗೆ ಹೋಗುತ್ತೇನೆ, ಇದು ಸಣ್ಣ ಫೆರ್ರಿ ಆದ ಕಾರಣ ನಾಲ್ಕು ಜನ ಏಕಕಾಲದಲ್ಲಿ ಡೆಕ್ ಗೆ ಹೋಗಬಹುದಷ್ಟೇ, ಆಸಕ್ತಿಯಿದ್ದರೆ ಬನ್ನಿ' ಅಂದ. ಡೆಕ್ ನ ಮೇಲೆ ಹೋಗಿ, ಅವನ ಜತೆ ಹರಟಲು ಶುರು ಮಾಡಿದೆ.

ಆತ ಬಂಗಾಲಿ ಮೂಲದ ಯುವಕ. ಆತನ ಹಿರಿಯರು ಎರಡು ತಲೆಮಾರಿನಿಂದಲೇ  ಪೊರ್ಟ್ ಬ್ಲೈರ್ ನಲ್ಲಿ ನೆಲೆಸಿದ್ದಾರೆ. ಪಿ.ಯು.ಸಿ ವರೆಗೆ ಓದಿದ್ದಾನೆ. ಅಂಡಮಾನ್ ನ ಸದಾ ಮಳೆ-ಸೆಖೆ ವಾತಾವರಣ..... ಜೀವನಾವಶ್ಯಕ  ವಸ್ತುಗಳಿಗೆ ಚೆನ್ನೈ , ಕಲ್ಕತ್ತ ಅಥವ ವಿಶಾಖ ಪಟ್ಟಣದಿಂದ ಬರುವ ಸಾಮಾಗ್ರಿಗಳ ಮೇಲೆ ಅವಲಂಬನೆ ಅನಿವಾರ್ಯ......ಕಾಲೇಜು ವಿದ್ಯಾಭ್ಯಾಸಕ್ಕೆ ಮೈನ್ ಲಾಂಡ್ ಗೇ  ಹೋಗಬೇಕಾಗುತ್ತದೆ.....  ತರಕಾರಿಗಳಿಗೆ ತುಂಬ ಬೆಲೆ.... ಸಮುದ್ರ ಉತ್ಪನ್ನಗಳು ಅಗ್ಗ ....ಇತ್ತೀಚೆಗೆ ಪ್ರವಾಸೋದ್ಯಮ  ಬೆಳೆದಿದೆ .... ಸರಕಾರೀ ಉದ್ಯೋಗಸ್ಥರು  ಜಾಸ್ತಿ.......ಕಾರ್ಖಾನೆಗಳು ಇಲ್ಲ....ಜರವಾ ಜನಗಳು ....ಇತರ ವಲಸೆಗಾರರು...ನಿರ್ಜನವಾದ ವೈಪರ್  ದ್ವೀಪದಲ್ಲಿ  ಒಬ್ಬನೇ ಒಬ್ಬ ವ್ಯಕ್ತಿ ಸುಮಾರು ೫೦ ವರ್ಷ ವಾಸವಾಗಿದ್ದ, ಆತ ಬಹಳ ಧೈರ್ಯಶಾಲಿಯಾಗಿದ್ದ , ಇತ್ತೀಚಿಗೆ ಮರಣಿಸಿದ...
.....ಹೀಗೆಲ್ಲಾ  ಮಾತಿನ ಲಹರಿ ಹರಿಯಿತು.

'ಹಾಗಾದರೆ ಅಂಡಮಾನ್ ನಲ್ಲಿ ಜೀವನ ನಡೆಸುವುದು ಬಹಳ ಕಷ್ಟವಾಗಿರಬೇಕಲ್ಲವೆ?" ಅಂದೆ.

ಅದಕ್ಕೆ ಅವನ ಸ್ಪಷ್ಟ ಉತ್ತರ ಹೀಗಿತ್ತು " ಮುಝೆ ಯೆಹಿ ಅಚ್ಚ ಲಗತಾ ಹೆ. ಸಾಲ್ ಮೆ ಏಕ್ ಬಾರ್ ಮೆ ಕಲ್ಕತ್ತ ಜಾತಾ ಹೂಮ್. ಉಧರ್ ಮೇರೆ ಜೈಸೆ ಲೋಗೊಂಕೋ ಕಾಮ್ ನಹಿ ಹೆ, ಇಧರ್ ಮೆರೆ ಪಾಸ್ ಜ್ಯಾದಾ ಪೈಸಾ ನಹಿ ಹೆ, ವರನಾ ಖಾನಾ-ಮಖಾನ್ ಕೊ ಕಮ್  ನಹಿ ಹೆ,   ದೆಖಿಯೆ ಅಂಡಮಾನ್ ಮೆ, ಕೊಯಿ ಭಿಕಾರಿ ನಹಿ ಹೇ, ಮೈನ್ ಲಾಂಡ್ ಮೆ ಕಿಥನೆ ಲೊಗ್ ಹೆ ಭಿಕಾರಿ..ಕಾಮ್ ನಹಿ ಉನ್ ಲೋಗೊಂಕೋ"  

ಕೆಲವು ತರಬೇತಿ ಕಾರ್ಯಕ್ರಮಗಳಲ್ಲಿ ಪ್ರಸ್ತುತಪಡಿಸುವ ವಿಚಾರ ಹೀಗಿರುತ್ತದೆ "ನಿಮ್ಮ ಕೆಲಸದಲ್ಲಿ ಪ್ರಾವೀಣ್ಯತೆ ಸಾಧಿಸಲು ನೀವು ಮಾಡಬೇಕಾದ ಪ್ರಥಮ ಕೆಲಸವೇನೆಂದರೆ, ನಿಮ್ಮ ಕೆಲಸವನ್ನು ಪ್ರೀತಿಸಿ, ಗೌರವಿಸಿ, ಕೆಲಸದಲ್ಲಿ  ಅನಂದ  ಕಂಡುಕೊಳ್ಳಿ".

ಸಂಜಯ್ ಇದಕ್ಕೆ ಒಂದು ಉತ್ತಮ ನಿದರ್ಶನ ಎನಿಸಿತು.

ಅಂಡಮಾನ್ ನ ರಾಸ್ ದ್ವೀಪ, ಆ ಕಾಲವೊಂದಿತ್ತು..ಭವ್ಯ ತಾನಾಗಿತ್ತು..

ಬ್ರಿಟಿಷರು ಅಂಡಮಾನನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಅಲ್ಲಿ 'ಶಿಕ್ಷಾ ನೆಲೆ'ಯನ್ನು ಸ್ಥಾಪಿಸಲು ನಿರ್ಧಾರ ಕೈಗೊಂಡ ಮೇಲೆ, ತಮ್ಮ ವಾಸ್ತ ವ್ಯಕ್ಕಾಗಿ 'ರಾಸ್' ದ್ವೀಪವನ್ನು ಬಳಸಿಕೊಂಡರು. ಸುಮಾರು ೧೮೫೮ ರಿಂದ  ೧೯೪೭ ರ ವರೆಗೂ (೩ ವರುಷಗಳ ಜಪಾನೀಯರ ಆಳ್ವಿಕೆ ಹೊರತುಪಡಿಸಿ) 'ರಾಸ್' ದ್ವೀಪ  ಬ್ರಿಟಿಷರ ಆಡಳಿತ ಕೇಂದ್ರವಾಗಿತ್ತು. 


ಅವರು ನಡೆಸಿರಬಹುದಾದ ವೈಭವೊಪೇತವಾದ ಜೀವನಶೈಲಿಯನ್ನು ಪ್ರತಿಬಿಂಬಿಸುವ ಬಂಗಲೆಗಳು, ಕ್ಲಬ್ಬು ಗಳು, ಬೇಕರಿ, ಮುದ್ರಣಾಲಯ, ಟೆನ್ನಿಸ್ ಕೊರ್ಟ್,  ಉಪ್ಪುನೀರನ್ನು ಸಿಹಿನೀರಾಗಿ  ಪರಿವರ್ತಿಸಲು  ಬಳಸುತಿದ್ದ ಬಾಯ್ಲರ್ ಗಳು, ಚರ್ಚ್..ಇತ್ಯಾದಿ  ಈಗ  ಶಿಥಿಲಾವಸ್ಥೆಯಲ್ಲಿವೆ.






ಚರ್ಚ್ ನ "ಗಂಟೆ-ಗೋಪುರ" ಮರದ ಬಿಳಲುಗಳ ಮಧ್ಯ    ಮರೆಯಾಗಿದೆ.

    ಬಾಯ್ಲರ್ ಗಳು  


ಮುದ್ರಣಾಲಯ

ಈಗ ಶಿಥಿಲಾವಸ್ಥೆ ಯಲ್ಲಿರುವ  ರಾಸ್ ದ್ವೀಪ ದ ಕಟ್ಟಡಗಳನ್ನು ಬೃಹತ್ ಮರಗಳ  ಬೇರುಗಳು ಹಾಗೂ ಬಿಳಲುಗಳು ಭದ್ರವಾಗಿ ಹಿಡಿದುಕೊಂಡಿವೆ. ಇವು ಗತವೈಭವದ ಕುರುಹಾಗಿ ಉಳಿದಿವೆ.

ಕೇವಲ ಒಂದು  ಕಿಲೋ ಮೀಟರ್  ದೂರದ ಪೊರ್ಟ್ ಬ್ಲೈರ್ ದ್ವೀಪದ ಜೈಲ್ ನಲ್ಲಿ  ನರಕಯಾತನೆ ಅನುಭವಿಸುತ್ತಿದ್ದ  ಕೈದಿಗಳು... ಸ್ವಾತಂತ್ರ್ಯ ಹೋರಾಟಗಾರರು...  ಮಗ್ಗುಲಲ್ಲೇ ಐಶಾರಾಮಿ ಬದುಕು ನಡೆಸುತ್ತಿದ್ದ  ಬ್ರಿಟಿಶ್  ಮಂದಿ!
ಆ ಭವ್ಯತೆ ಯನ್ನು ಬ್ರಿಟಿಶರಿಗೆ ಒದಗಿಸಿಕೊಡಲು, ಅದೆಷ್ಟು ಜನ  ಪ್ರತಿಕೂಲ ಹವೆಯಲ್ಲಿ, ನಿರಂತರ  ದೈಹಿಕ, ಮಾನಸಿಕ ಹಿಂಸೆಯ  ನಡುವೆ ದುಡಿದಿದ್ದಾರೋ!!

Monday, October 4, 2010

'ಜರವಾ' ಗಳ ನಾಡಿನಲ್ಲಿ..

ಅಂಡಮಾನ್ ನ ಪ್ರಮುಖ ಪ್ರವಾಸಿ  ತಾಣವಾಗಿರುವ 'ಜರವಾ' ಆದಿವಾಸಿಗಳ ರಕ್ಷಿತಾರಣ್ಯಕ್ಕೆ  ನಾಳೆ ಹೋಗುವುದೆಂದು ನಮ್ಮಟೂರ್  ವ್ಯವಸ್ಥಾಪಕರು ಪ್ರಕಟಿಸಿದಾಗ, ಈ ಆದಿಮಾನವರು ಹೇಗಿರುತ್ತಾರೋ ಎಂಬ ಕುತೂಹಲ ಉಂಟಾಯಿತು. ಅಲ್ಲಿನ ಟ್ರಾವೆಲ್ ಸಂಸ್ಥೆಯ ಮಾರ್ಗದರ್ಶಕರ ಮಾತುಗಳು ಹೀಗಿದ್ದುವು:

'ಜರವಾ'ಗಳು ಹಿಂದೆ ನರಭಕ್ಷಕರಾಗಿದ್ದರು ಹಾಗು ಅವರಿರುವ ಕಾಡಿಗೆ ಇತರರ ಪ್ರವೇಶವನ್ನು  ಸಹಿಸುತ್ತಿರಲಿಲ್ಲ. ಕೆಲವು  ವರುಷಗಳ ಹಿಂದೆ ಜರವಾ ಮನುಷ್ಯನೊಬ್ಬ ಕಣಿವೆಯಲ್ಲಿ ಬಿದ್ದು ಕಷ್ಟಪಡುತ್ತಿರುವುದನ್ನು ನೋಡಿದ  ಅಧಿಕಾರಿಗಳು  ಅವನಿಗೆ ಫೋರ್ಟ್ ಬ್ಲೈರ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಟ್ಟು  ವಾಪಸ್ ಕಾಡಿಗೆ ಬಿಟ್ಟರಂತೆ, ಅಂದಿನಿಂದ ಜರವಾ ಜನಗಳಿಗೆ ನಾಗರಿಕ ಸಮಾಜವು ತಮಗೆ ಹಾನಿಯನ್ನು ಉಂಟುಮಾಡುವುದಿಲ್ಲ ಎಂಬ ನಂಬಿಕೆ ಬಂದು, ಈಗೀಗ  ಬಸ್ ಗಳು ಓಡಾಡುವ ಮಾರ್ಗದಲ್ಲಿ ಆರಾಮವಾಗಿ ಕಾಣ ಸಿಗುತ್ತಾರೆ.

ಈಗಲೂ ಬೇಟೆಯಾಡುತ್ತ, ದಟ್ಟವಾದ  ಕಾಡಿನಲ್ಲಿ ಸಣ್ಣ ಹುಲ್ಲಿನ ಜೋಪಡಿಗಳನ್ನು ಕಟ್ಟಿಕೊಂಡು ಜೀವಿಸುವ ಇವರಿಗೆ ಬಟ್ಟೆ, ವಿದ್ಯೆ, ಹಣ, ವ್ಯವಹಾರ ಇತ್ಯಾದಿಗಳ ಅರಿವಿಲ್ಲ.  ೧೦ ರುಪಾಯಿಗಳನ್ನು ಕೊಟ್ಟರೆ ಎಸೆಯುತ್ತಾರೆ, ಆದರೆ ೫ ರುಪಾಯಿ ಕೊಟ್ಟರೆ ನಗುತ್ತ  ಸ್ವೀಕರಿಸುತ್ತಾರೆ, ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅವರಿಗೂ 'ಪಾನ್' ನ ರುಚಿ ಗೊತ್ತಾಗಿದೆ, ಕಾಡಿನ ಮಗ್ಗುಲಲ್ಲಿ ಇರುವ ಸಣ್ಣ ಅಂಗಡಿಯಲ್ಲಿ ೫ ರುಪಾಯಿ ನಾಣ್ಯ ಕೊಟ್ಟರೆ 'ಪಾನ್' ಸಿಗುತ್ತದೆ  ಎಂಬಷ್ಟು ಜ್ಞಾನ ಗಳಿಸಿದ್ದಾರೆ!

ಇತ್ತೀಚಿಗಿನ ದಿನಗಳಲ್ಲಿ ಸರಕಾರದ ಪ್ರಯತ್ನಗಳಿಂದ ಜರವಾ ಜನರು ಇತರ ಸಮಾಜದ ಅಸ್ತಿತ್ವವನ್ನು ಸ್ವೀಕರಿಸಿದ್ದಾರೆ.
ಅವರ ಕೈಗಳಲ್ಲಿ  ಬಿಲ್ಲು, ಭರ್ಚಿ, ಕೋಲುಗಳು ಇರುತ್ತವಾದರೂ, ಇತ್ತೀಚಿಗಿನ ದಿನಗಳಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಹಾಗೆಂದು ಅವರನ್ನು ಕೆಣಕಬಾರದು, ಫೋಟೋ ತೆಗೆಯಲೇ ಬಾರದು,  ಕಿಟಿಕಿಯಿಂದ ಹೊರಗೆ  ಬಿಸ್ಕೆಟ್ -ಚಾಕೋಲೆಟ್-ಪಾನ್-ಹಣ -ಬಟ್ಟೆ ಇತ್ಯಾದಿ ಏನನ್ನೂ ಎಸೆಯಬಾರದು ಎಂಬ ನಿಯಮವಿದೆ.

ಅವರ ಸ್ನೇಹವನ್ನು ಗಳಿಸಲಿಕ್ಕಾಗಿ ಅರಣ್ಯಾಧಿಕಾರಿಗಳು ತಿಂಗಳಿಗೊಮ್ಮೆ ಬಾಳೆಹಣ್ಣು ಮತ್ತು  ತೆಂಗಿನಕಾಯಿಗಳನ್ನು  ಜರವಾ ಜನರಿಗೆ ಸಿಗುವಂತೆ ಕಾಡಿನಲ್ಲಿ ಬಿಟ್ಟು ಬರುತ್ತಾರಂತೆ.ಇವರ  ಸಂತತಿ ಕಡಮೆಯಾಗುತ್ತಾ ಬಂದು ಈಗ ಕೇವಲ ೨೫೦ ಮಂದಿ ಜರವಾಗಳು ಇದ್ದಾರಂತೆ.

ಒಟ್ಟಿನಲ್ಲಿ, 'ಜರವಾ ರಕ್ಷಿತಾರಣ್ಯ'ವಾದ ಜಿರ್ಕಾತಂಗ್ ಪ್ರದೇಶದಿಂದ  ಮಧ್ಯ ಅಂಡಮಾನ್ ನ ನಡುವಿನ  ದಟ್ಟ ಕಾಡುಗಳ ನಡುವೆ, ಬಸ್  ಚಲಿಸುವಾಗ ಸುಮಾರು  ೨೦ ಜರವಾ ಜನರನ್ನು ನಾವು ನೋಡಿದೆವು. ಚಿಕ್ಕಮಕ್ಕಳ  ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ  ವೇಷಧಾರಿಗಳಂತೆ ಕಾಣುವ ಕೆಲವರು, ಅದೇ ರೀತಿಯ ವಯಸ್ಕರು, ಹೆಣ್ಣು ಮಕ್ಕಳು ಕಾಣಿಸಿದರು. ಕೆಲವು ಮಕ್ಕಳ ಮೈಯಲ್ಲಿ ಚಡ್ಡಿ ಹಾಗು ಕಾಲಿನಲ್ಲಿ ಚಪ್ಪಲಿ ಕಂಡುಬಂತು. ಕೆಲವು ಬಾಲಕಿಯರು  ಚಿಪ್ಪಿನ ಅಥವಾ ಮುತ್ತಿನ ಹಾರಗಳನ್ನು ಧರಿಸಿದ್ದರು. ಸೊಂಟದ ಸುತ್ತ ಕೆಂಪಿನ ದಾರಗಳನ್ನು   'ಫ್ರಿಲ್' ನಂತೆ ಬಿಟ್ಟಿದ್ದರು. ಇನ್ನು ಕೆಲವರು ಮುಖಕ್ಕೆ ಅದೇನೋ  ಮಣ್ಣಿನಂತೆ ಕಾಣುವ ಲೇಪ ಹಚ್ಚಿದ್ದರು. ಒಂದೆರಡು ಜನ ಟವೆಲ್ ನ್ನು ಉಟ್ಟುಕೊಂಡಿದ್ದರು.

ನಾವು ನೋಡಿದ 'ಜರವಾ' ಜನರು, ತಮಗೆ ಏನಾದರು ಸಿಗುತ್ತದೆಯೇ ಎಂಬ ನಿರೀಕ್ಷೆಯಲ್ಲಿ ಇದ್ದ ಹಾಗಿತ್ತು. ಇವರು ನಿಜವಾಗಿಯೂ ಒಂದು ಕಾಲದಲ್ಲಿ ನರ ಭಕ್ಷಕರಾಗಿರಲು  ಸಾಧ್ಯವೇ ಅನಿಸಿತು.

ಇವರನ್ನು 'ಪ್ರವಾಸಿ ಆಕರ್ಷಣೆ' ಎಂದು ಪರಿಗಣಿಸುವ ಬದಲು, ಯೋಗ್ಯವಾದ  ಅವಕಾಶ,ವಿದ್ಯಾಭ್ಯಾಸ ಕಲ್ಪಿಸಿದರೆ, ಇವರು ಸಮಾಜದ ಮುಖ್ಯವಾಹಿನಿಯ ಜತೆಗೆ ಬೇರೆಲಾರರೆ? ಯಾಕೋ, ಇದು ಸರಿಯಲ್ಲ ಅನಿಸಿತು.

ಜರವಾ ಜನರನ್ನು ನೋಡಿದುದಕ್ಕಿಂತಲೂ , ಅವರನ್ನು ನೋಡಲು ನಾವು ಪಟ್ಟ ಶ್ರಮ ಹಾಗು  ಅಂಡಮಾನ್ ನ ಬಸ್ ಪ್ರಯಾಣ ನನಗೆ ಹೆಚ್ಚು ಮುದ ಕೊಟ್ಟಿತು. 'ಜರವಾ ರಕ್ಷಿತಾರಣ್ಯ' ತಲಪಲು, ನಾವು ಉಳಿದುಕೊಂಡಿದ್ದ ಸುಮಾರು ೩ ಗಂಟೆ ಬಸ್ ಪ್ರಯಾಣ. ನಮ್ಮ ಬಳಗ ಒಂದು ಬಸ್ಸನ್ನೇರಿ, ೩ ಗಂಟೆ  ಹರಸಾಹಸ ಪ್ರಯಾಣ ಮಾಡಿ 'ಜಿರ್ಕಾತಂಗ್' ಎಂಬ ಪುಟ್ಟ ಊರನ್ನು ಸೇರಿತು.

ದಿನಕ್ಕೆ ಕೇವಲ ೧೫೦ ವಾಹನಗಳಿಗೆ 'ಜರವಾ' ಜನರಿರುವ  ಜಿರ್ಕತಾಂಗ್ ಎಂಬಲ್ಲಿ  ಕಾಡನ್ನು ಪ್ರವೇಶಿಸಲು ಅನುಮತಿ ಕೊಡುತ್ತಾರಂತೆ.ಈ ವಾಹನಗಳು  ಜಿರ್ಕತಾಂಗ್ ಗೇಟ್ ನ ಬಳಿ  ಬೆಳಗ್ಗೆ ೬ ಗಂಟೆಗೇ  ಸಾಲಾಗಿ  ನಿಲ್ಲಬೇಕು. ಗೇಟ್ ತೆರೆದಾಗ ಮುಂದೆ ಒಂದು ಪೋಲಿಸ್ ವಾಹನ, ಹಿಂದೆ ಸಾಲಾಗಿ ಇತರ ವಾಹನಗಳು ಹೋಗಬೇಕು. ಕೊನೆಯಲ್ಲಿ ಇನ್ನೊದು ಪೋಲಿಸ್ ವಾಹನ ಇರುತ್ತದೆ. ಕಾಡಿನಲ್ಲಿ ಬಸ್ ನ್ನು ಎಲ್ಲೂ ನಿಲ್ಲಿಸುವಂತಿಲ್ಲ.

ಈ ಬಸ್ ಪ್ರಯಾಣ ಕೆಲವರಿಗೆ ಕಿರಿ-ಕಿರಿ ತರಿಸಿತು. ಕೆಲವರು ಕನಿಷ್ಠ ಸೌಲಭ್ಯಗಳಿಲ್ಲದಿರುವ  ಈ  ಬಸ್ ನ್ನು ಯಾಕಾದರೂ ಕರೆಸಿದೆರೆಂದು  ಟೂರ್  ವ್ಯವಸ್ಥಾಪಕರನ್ನು ತರಾಟೆಗೆ ತೆಗೆದು ಕೊಂಡರು.

ಕಾರಣಗಳು ಹೀಗಿದ್ದುವು: "ಮುಂದುಗಡೆಯ ಸೀಟ್ ಗೆ ಮುಗ್ಗರಿಸಿದಾಗ ಹಿಡಿಯಲು ಕಂಬಿ ಇಲ್ಲ.. . ಕಿಟಿಕಿ ಗಾಜುಗಳು ಏನೇ ಮಾಡಿದರು  ಹಿಂದೆ-ಮುಂದೆ ಹೋಗುತ್ತಾ ಇಲ್ಲ.....ಸೀಟ್ ಇಬ್ಬರಿಗೆ ಕೂರುವಷ್ಟು ಅಗಲವಿಲ್ಲ ..... ಮಳೆ ನೀರೆಲ್ಲ ಬಸ್ ನ ಒಳಗೆ ಬರ್ತಾ ಇದೆ......ಬೆಳಗ್ಗೆ ೪:೩೦ ಗಂಟೆಗೆ ಬಂದ ಈ ಬಸ್ ಹಿಡಿಯಲು ನಾವು ೩ ಗಂಟೆಗೇ  ಎದ್ದು ಮಾರ್ಗದ ಬದಿ ಕಾಯಬೇಕಿತ್ತೆ? " ಇತ್ಯಾದಿ.

'ನಾನೇನು ಮಾಡ್ಲಿ, ಈ ಊರಲ್ಲಿ ಇಂಥಹ ಬಸ್ ಗಳೇ ಇರುವುದು,  ಇದಾದರು ಸಿಕ್ಕಿತಲ್ಲ' ಎಂಬುದು ಆತನ ಅಳಲು. ಮಳೆ ನೀರು  ಒಳಗೆ ಸುರಿಯುತಿದ್ದ ಸೀಟ್ ನಲ್ಲಿದ್ದ ಸ್ವಲ್ಪ ವಯಸ್ಸಾಗಿದ್ದ ಸಹಪ್ರಯಾಣಿಕರು ಕುಳಿತ್ತಿದ್ದರು. ಅವರನ್ನು ನಮ್ಮ ಸೀಟ್ ನಲ್ಲಿ ಕುಳ್ಳಿರಿಸಿ, ರೇಖಾ ( ನನ್ನ ಸಹೋದ್ಯೋಗಿ) ಮತ್ತು ನಾನು ಅವರ ಸೀಟ್ ನಲ್ಲಿ  ಕುಳಿತೆವು. ಬಸ್ ಬ್ರೇಕ್ ಹಾಕಿದಾಗ  ಮುಗ್ಗರಿಸುತ್ತ- ಸಾವರಿಸುತ್ತ-ನಗುತ್ತ ಇದ್ದೆವು.

ಸೋನೆಯಾಗಿ ಸುರಿಯುತಿದ್ದ ಮಳೆ ಇದ್ದಕಿದ್ದಂತೆ  ಜೋರಾಯಿತು. ಏನೇ ಮಾಡಿದರು, ಕಿಟಿಕಿಯ ಗಾಜು ಸರಿಸಲು ನಮ್ಮ ಕೈಯಿಂದಲೂ ಆಗಲಿಲ್ಲ. ಕೊನೆಗೆ , ಬಸ್ ನ ನಿರ್ವಾಹಕನ ಸಹಾಯ ಕೇಳಿದೆವು. ಆತ ಮಾಡಿದ ಕೆಲಸವೇನೆಂದರೆ- ಇಡೀ ಕಿಟಿಕಿಯ ಫ್ರೇಮ್ ನ್ನು ಕಿತ್ತು ನಮ್ಮ ಕಾಲಿನ ಪಕ್ಕ ಇರಿಸಿದ! ಈಗ ಮಳೆ ನೀರು ಬಸ್ ನ ಒಳಗೆ ಬರಲು ಮತ್ತಷ್ಟು ಅನುಕೂಲವಾಯಿತು!

ಆಮೇಲೆ ಬಸ್ ನ ಗೇರ್  ಬಾಕ್ಸ್ ನ ಪಕ್ಕದಲ್ಲಿ ಕೂರುವಂತೆ ನಮಗೆ ವಿನಂತಿಸಿದ. ಅಲ್ಲಿ ಹೋಗಿ ನೋಡಿದರೆ, ಬಸ್ ನ ತಳ ಸುಮಾರು ಅರ್ಧ ಅಡಿ ಅಗಲಕ್ಕೆ ಕಿತ್ತುಹೋಗಿ,ಮಾರ್ಗ ಕಾಣಿಸುತ್ತಿತ್ತು. ಕಾಲಿಟ್ಟರೆ ಕಾಲು ಸಿಕ್ಕಿಹಾಕಿಕೊಳ್ಳುವುದು ಖಂಡಿತ. ಈ 'ಆಫರ್'ಗಿಂತ  ಮಳೆ ನೀರು ಬೀಳುವ ಸೀಟ್ ಎಷ್ಟೋ ವಾಸಿ ಎಂದು ಮರಳಿ ಹಳೆ ಜಾಗಕ್ಕೆ ಬಂದೆವು.

ಸಣ್ಣದಾದ ಕೊಡೆಯನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದೆ. ಈ ಸಂದರ್ಭದಲ್ಲಿ ಸದುಪಯೋಗಕ್ಕೆ ಬಂತು. ಸರಿ, ಅದನ್ನು ಬಿಡಿಸಿ, ಕಿಟಿಕಿಯ ಫ್ರೇಮ್ ನ ಜಾಗದಲ್ಲಿ ಇಟ್ಟೆವು. ಅಂತೂ-ಇಂತೂ, ಬಸ್ ನ ಒಳಗೆ 'ಕೊಡೆ ಬಿಡಿಸಿ' ಕುಳಿತ ನಮ್ಮ ಚಾತುರ್ಯವನ್ನು ಕಂಡು ಇತರರು ಹೃತ್ಪೂರ್ವಕವಾಗಿ ನಕ್ಕರು. ಹರಟೆ ಹೊಡೆಯುತ್ತಾ, ನಗುತ್ತಾ ಸಾಗಿತ್ತು ನಮ್ಮ ಪಯಣ. ಜತೆಯಲ್ಲಿ ಸಹಪ್ರಯಾಣಿಕರು ತಮ್ಮ ತಮ್ಮ ಊರುಗಳಿಂದ ತಂದ ಕುರುಕಲು ತಿಂಡಿಗಳ ವಿನಿಮಯವೂ ಆಯಿತು.

ಮೈಸೂರು-ಬೆಂಗಳೂರು  ಮಧ್ಯದ ವೋಲ್ವೋ ಬಸ್ ಪ್ರಯಾಣದ ಏಕತಾನತೆಗೆ, ಪ್ರಯಾಣಿಕರ ನಿರಂತರ ಗಡಿಬಿಡಿಗೆ, ಪರಿಚಯವಿದ್ದರೂ  ಮುಗುಳು ನಗೆ ವಿನಿಮಯಕ್ಕೂ ಸಮಯವಿಲ್ಲದ ಯಾಂತ್ರಿಕತೆಗೆ ಬೇಸತ್ತಿದ್ದ ನನಗೆ, ಜರವಾ ಆದಿವಾಸಿಗಳನ್ನು ನೋಡಿದುದಕ್ಕಿಂತಲೂ, ಈ ವರ್ಣರಂಜಿತ ಬಸ್ ಪ್ರಯಾಣ ತುಂಬಾ ಖುಷಿ ಕೊಟ್ಟಿತು.

Friday, October 1, 2010

ಮರಳಿನಲ್ಲಿ 'ಮಕ್ಕಳಾಟ' ಮರಳಿ ನೋಡಬಾರದೆ..

ಸಮುದ್ರವೇ ಸುತ್ತುವರಿದಿರುವ  ಅಂಡಮಾನ್ ನಲ್ಲಿ  ಬೀಚುಗಳಿಗೇನು  ಕೊರತೆ ? ಅಲ್ಲಿದ್ದ ಒಂದು ವಾರದಲ್ಲಿ  ನಾವು ಸಂದರ್ಶಿಸಿದ ಬೀಚುಗಳು ಹಲವಾರು.

ಹವಳ ದ್ವೀಪವೆಂದು ಕರೆಯಲ್ಪಡುವ ಅಂಡಮಾನ್ ನ    'ನಾರ್ತ್ ಬೇ' ದ್ವೀಪ ದಲ್ಲಿ ಸಮುದ್ರದ ಕೆಲವು ಭಾಗಗಳು ಪಾರದರ್ಶಕವಾಗಿರುತ್ತವೆ. ಪ್ರವಾಸಿಗಳನ್ನು  ಚಿಕ್ಕದಾದ, ಪಾರದರ್ಶಕ ಗ್ಲಾಸ್ ನ  ತಳವಿರುವ  ದೋಣಿಯಲ್ಲಿ  ಕರೆದೊಯ್ಯುತ್ತಾರೆ.  ಕೆಲವು  ನಿಗದಿತ ಜಾಗಗಳಲ್ಲಿ ದೋಣಿಯನ್ನು  ನಿಲ್ಲಿಸಿ ಗಾಜಿನ ತಳದ ಮೂಲಕ 'ಕೊರಲ್' ನ್ನು ತೋರಿಸುತ್ತಾರೆ.  ಇಲ್ಲಿ  ಸಮುದ್ರದ ಒಳಗೆ ಹೋಗಿ  'ಸ್ನೋರ್ಕೆಲಿಂಗ್' ಕೂಡ ಮಾಡಬಹುದು.  ಹೀಗೆ 'ಕೊರಲ್' ಗಳನ್ನು ತೀರ ಸನಿಹದಿಂದ  ನೋಡಬಹುದು.

ಇದುವರೆಗೆ ಹವಳವೆಂದರೆ ಕೆಂಪು/ನಸುಗೆಂಪು ಬಣ್ಣದ ಆಭರಣ ತಯಾರಿಸಲು ಉಪಯೋಗಿಸುವ ವಸ್ತು ಎಂದು ತಿಳಿದಿದ್ದ ನನಗೆ, ಸಮುದ್ರದ ತಳದಲ್ಲಿ ಗೊಂಚಲು - ಗೊಂಚಲುಗಳಂತೆ, ಸಣ್ಣ ಪುಟ್ಟ ಕಲ್ಲುಗಳಂತೆ ಕಂಡ  ಬಿಳಿ/ಕಂದು/ನೀಲಿ ಅಥವಾ ಮಿಶ್ರ  ಬಣ್ಣದ  ಕೊರಲ್ ಗಳನ್ನು ನೋಡಿ ಆಶ್ಚರ್ಯವಾಯಿತು.  ಇಲ್ಲಿ ಸಮುದ್ರದ ದಂಡೆಯುದ್ದಕ್ಕೂ 'ಕೊರಲ್'  ಕಲ್ಲುಗಳು  ಬಿದ್ದಿರುತ್ತವೆ. ಇವನ್ನು ಔಷಧಿಗೂ  ಬಳಸುತ್ತಾರಂತೆ.

"ಬಿಟ್ಟಿಯಾಗಿ ಸಿಗುತ್ತದೆಯೆಂದು ಬ್ಯಾಗ್ ನಲ್ಲಿ ಹಾಕಬೇಡಿ,ರಸೀದಿ ಇಲ್ಲದೆ ತೆಗೆದುಕೊಂಡು ಹೋಗುವುದು ಶಿಕ್ಷಾರ್ಹ ಅಪರಾಧ, ಪೋರ್ಟ್ ಬ್ಲೈರ್  ವಿಮಾನ  ನಿಲ್ದಾಣದಲ್ಲಿ ತೊಂದರೆಯಾಗಬಹುದು"  ಎಂದು ನಮ್ಮ ಟೂರ್ ವ್ಯವಸ್ಥಾಪಕರು ಎಚ್ಚರಿಸಿದರು.

ನಮ್ಮ ತಂಡದಲ್ಲಿ 'ಅಜ್ಜಿಯರ' ಸಾಲಿಗೆ ಸೇರಿಸಬಹುದಾದ ಹಲವರು ಇದ್ದರು. ' ಯಾಕೋ ಸುಸ್ತು, ನಿನ್ನೆಯಿಂದ  ಪಾದ ನೋವು,  ಮೊಮ್ಮಗ ಏನು ಮಾಡುತ್ತಾನೋ, ನಿವೃತ್ತಿ ಆಗಿ ಏಳು ವರುಷ  ಆಯಿತು, ಬಿ.ಪಿ ಸುರುವಾಗಿದೆ..    . . ಇತ್ಯಾದಿ  ವಯಸ್ಸನ್ನು ಸಾಬೀತುಗೊಳಿಸುತಿದ್ದ ವರೆಲ್ಲ ನೀರಿಗಿಳಿದಾಗ ಮಕ್ಕಳನ್ನು  ನಾಚಿಸುವಂತೆ   ಆಟ ಆಡಿದರು. 





ಕಾರ್ಬನ್ ಕಾವ್  ಬೀಚ್ ನಲ್ಲಿ ಸಮುದ್ರದ ಅಲೆಗಳಿಗೆ ಮೈಯೊಡ್ಡಿ ಆಡಬಹುದು.  ಇಲ್ಲಿ ಅಲೆಗಳು ತುಂಬಾ ಅಬ್ಬರವಿಲ್ಲದೇ ಕಿನಾರೆಗೆ  ಬರುತಿದ್ದುವು.ಇಲ್ಲೂ ವಯೋಬೇಧ ಮರೆತು ನಮ್ಮ  ತಂಡ ನೀರಲ್ಲಿ ಕುಣಿಯಿತು.



 
ಬಾಲಕನೊಬ್ಬ  ಎದೆ ವರೆಗೂ ಮರಳಿನಲ್ಲಿ ಹೂತು  ಕುಳಿತು, 
ಅಲೆಗಳು ಬಂದು ಮರಳು ಕೊಚ್ಚಿಕೊಂಡು ಹೋಗುವುದನ್ನು ಕಾಯುತಿದ್ದ.



ವಂದೂರ್ ಬೀಚನಲ್ಲಿ  ಅಲೆಗಳು ಕಾಣಿಸಲೇ ಇಲ್ಲ.  ಸಮುದ್ರದ ನೀರು ಬಹಳ ತಿಳಿಯಾಗಿತ್ತು.  ಅಲ್ಲಿನ ನೀರು  ನಸುಗೆಂಪು, ಕೆಂಪು, ನಸುನೀಲಿ... ಹೀಗೆ  ಹಂತ ಹಂತ ವಾಗಿ  ಹೆಚ್ಚುತ್ತ ಕೊನೆಗೆ ಕಡುನೀಲಿಯಾಗಿ ದಿಗಂತದ ವರೆಗೂ ಬಹಳ ರಮ್ಯವಾಗಿ ಕಾಣಿಸುತ್ತಿತ್ತು. ಇಲ್ಲಿ ಮೊಸಳೆಗಳು ಇರುತ್ತದೆಯೆಂದು ಎಚ್ಚರಿಸಿದ ಕಾರಣ ಹೆಚ್ಚಿನವರು ನೀರಿಗೆ ಇಳಿಯಲಿಲ್ಲ.  

ಹಾವ್ಲೋಕ್  ಬೀಚಲ್ಲಿ, ಸಮುದ್ರ ಜೀವಿಯೊಂದು ಮರಳಿನ ಸಣ್ಣ ಗೋಲಿಗಳನ್ನು  ರಚಿಸುತ್ತ ದಂಡೆಯುದ್ದಕ್ಕೂ ಚಿತ್ತಾರ ಬರೆಯುತ್ತಿತ್ತು. ಎಲ್ಲಿ ನೋಡಿದರೂ ಪುಟ್ಟ ಪುಟ್ಟ ಮರಳಿನ ಗೋಲಿಗಳು.  ಇವುಗಳನ್ನು ನಿರ್ದಾಕ್ಷಿಣ್ಯವಾಗಿ  ಕೊಚ್ಚ್ಚಿಕೊಂಡು ಹೋಗುವ ಅಲೆಗಳು, ಅಷ್ಟೇ ನಿರ್ಲಿಪ್ತತೆಯಿಂದ ಪುನಃ ಮರಳಿನ ಗೋಲಿಗಳನ್ನು ರಚಿಸುವ ಪುಟ್ಟ ಸಮುದ್ರ ಜೀವಿ. 

ಕೆಲವು ಔದ್ಯೋಗಿಕ ತರಬೇತಿ ಕಾರ್ಯಕ್ರಮಗಳಲ್ಲಿ, 'ಸೋಲನ್ನು ಗೆಲುವಾಗಿ ಸ್ವೀಕರಿಸಬೇಕು, ಮರಳಿ  ಮರಳಿ ಯತ್ನವ ಮಾಡು. ನೆವರ್  ಗಿವ್ ಅಪ್  ' ಇತ್ಯಾದಿ ಹಲವು ಬಾರಿ ಕೇಳಿಸಿಕೊಂಡಿದ್ದೇನೆ.  ಚಿಕ್ಕ ಮಕ್ಕಳು ಇಂಥಹ ತರಬೇತಿ ಪಡೆಯದೇ , ಎಷ್ಟೊಂದು ಆಸಕ್ತಿಯಿಂದ ಮರಳಿನಲ್ಲಿ ಮಕ್ಕಳಾಟ ಮರಳಿ ಮರಳಿ ಆಡುತ್ತಾರಲ್ಲ! ಈ ಸಮುದ್ರ ಜೀವಿಯು ಎಷ್ಟೊಂದು ಸಲ ಮರಳಿ ಮರಳಿ  ಯತ್ನ  ಮಾಡುತ್ತಿದೆಯಲ್ಲ! 'ಪ್ರಕೃತಿಯ ಮುಂದೆ ಮಾನವ ಯಾವತ್ತು ಶಿಶು' ಎಂಬ ಮಾತು ನೆನಪಾಯಿತು.
  

Friday, September 24, 2010

ಅಂಡಮಾನಿನ ಸೆಲ್ಯೂಲರ್ ಜೈಲ್ ...

ಅಂಡಮಾನಿಗೆ ಪ್ರವಾಸ   ಹೊರಟಿದ್ದೇನೆಂದು ಸಹೋದ್ಯೋಗಿಗಳೊಡನೆ ಹೇಳಿಕೊಂಡಾಗ  ಸಿಕ್ಕಿದ ಪ್ರತಿಕ್ರಿಯೆ ಹೀಗಿತ್ತು:
"ಅಲ್ಲಿ ಏನಿದೆ ಅಂತ ಹೋಗುತ್ತೀರ ? ಜೈಲ್ ನೋಡೋಕೆ ಅಷ್ಟು ಖರ್ಚು ಮಾಡಿಕೊಂಡು ಅಂಡಮಾನಿಗೆ ಹೋಗ್ಬೇಕಾ ? ಯಾಕೆ  ಮೈಸೂರಿನಲ್ಲಿ  ಜೈಲ್ ಇಲ್ವಾ?"  

ಕಳೆದ ವಾರ ಅಂಡಮಾನ್ ನ  ಸೆಲ್ಯೂಲರ್ ಜೈಲ್ ನ ಅಂಗಳದಲ್ಲಿ ಓಡಾಡಿದ್ದೆ. ಸ್ವಾತಂತ್ರ್ಯ ಪೂರ್ವದಲ್ಲಿ  'ಕಾಲಾಪಾನಿ' ಶಿಕ್ಷೆ ಗೆ ಗುರಿಯಾದವರನ್ನು ಅತ್ಯಂತ ಅಮಾನುಷವಾಗಿ ದಂಡಿಸಲೆಂದೇ ಕಟ್ಟಲಾದ ಈ ಜೈಲ್,  ಬ್ರಿಟಿಶ್ ಸರಕಾರದ ದಬ್ಬಾಳಿಕೆ  ಹಾಗು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ಕಷ್ಟ ಕೋಟಲೆಗಳಿಗೆ  ಸಾಕ್ಷಿಯಾಗಿ ನಿಂತಿದೆ.

ಈಗ ಸೆಲ್ಯೂಲರ್ ಜೈಲ್ ಒಂದು ರಾಷ್ಟ್ರೀಯ ಸ್ಮಾರಕ . ಜೈಲನ ಆವರಣದಲ್ಲಿ , ಪ್ರತಿದಿನ ಸಂಜೆಯ ಸಮಯ 'ಧ್ವನಿ -ಬೆಳಕು' ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಾರೆ. ತೀರಾ ಹೃದಯಸ್ಪರ್ಶಿಯಾದ ಈ ಕಾರ್ಯಕ್ರಮವನ್ನು ಆಲಿಸಿ-ವೀಕ್ಷಿಸಿ ಹೊರ ಬರುವಾಗ, ನಮ್ಮ ಸ್ವಾತಂತ್ಯ್ರ ಹೋರಾಟಗಾರರು  ಮಾಡಿದ ತ್ಯಾಗ, ಅನುಭವಿಸಿದ ಹಿಂಸೆ, ಕೆಲವರಿಗೆ ಗಲ್ಲುಶಿಕ್ಷೆ- ಅವರಿಗೆ ಆಗಿರಬಹುದಾದ  ಹಸಿವು, ನಿರಾಶೆ, ನೋವು, ಅಸೌಖ್ಯತೆ,  ಏಕಾಂಗಿತನ- ಇವಕ್ಕೆಲ್ಲ ಕಾರಣವಾದ ಬ್ರಿಟಿಶ್ ಸರಕಾರ - ಸೆಲ್ಯುಲರ್ ಕುಖ್ಯಾತ ಜೈಲರ್ ಡೇವಿಡ್ ಬಾರಿಯ  ಅಟ್ಟಹಾಸದ ನುಡಿಗಳು ..ಇವೆಲ್ಲ ಮನಸ್ಸಿಗೆ ತುಂಬಾ  ವೇದನೆಯನ್ನು  ಉಂಟುಮಾಡುತ್ತವೆ.


ಈತನ ಹಿಂಸೆ ತಡೆಯಲಾರದೆ  ಕೆಲವರು ಮಾನಸಿಕವಾಗಿ  ಅಸ್ವಸ್ಥರಾದರಂತೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡರಂತೆ. 




ಮಧ್ಯ ದಲ್ಲಿ ಒಂದು ಗೋಪುರವಿದ್ದು, ಚಕ್ರದ ಕಡ್ಡಿಗಳಂತೆ 
ನಿರ್ಮಿಸಲಾದ ಜೈಲ್ ನಲ್ಲಿ ಏಳು 'ವಿಂಗ್'ಗಳು ಇದ್ದವಂತೆ.
ಪ್ರತಿ ವಿಂಗ್ ನಲ್ಲಿ ೩ ಅಂತಸ್ತುಗಳಿವೆ.








ಒಂದು ವಿಂಗ್ ನ ಮುಂಭಾಗಕ್ಕೆ  ಮತ್ತೊಂದು ವಿಂಗ್ ನ ಹಿಂಭಾಗದ ಗೋಡೆ ಕಾಣಿಸುವಂತೆ ಕಟ್ಟಿದ್ದಾರೆ. ಪ್ರತಿ ಸೆಲ್ ನಲ್ಲೂ, ಸುಮಾರು ೧೦ ಅಡಿ ಎತ್ತರದಲ್ಲಿ ಗವಾಕ್ಷಿ ಇದೆ. ಹಾಗಾಗಿ, ಸೆಲ್ ನ ಒಳಗಿರುವ ವ್ಯಕ್ತಿ ಇತರರೊಡನೆ ಸಂಪರ್ಕ ಸಾಧಿಸಲು ಸಾಧ್ಯವೇ ಇಲ್ಲ.

ವೀರ ಸಾವರ್ಕರ್ ಅವರ ಸಹೋದರ ಕೂಡ ಇದೆ ಜೈಲ್ ನಲ್ಲಿ ಬಂಧಿಯಾಗಿ ಇದ್ದರೆಂಬ ವಿಚಾರ ಅವರಿಗೆ ಎರಡು ವರುಷಗಳ ಕಾಲ ಗೊತ್ತಿರಲಿಲ್ಲವಂತೆ!! 

ಈಗ ಕೇವಲ ಎರಡು ವಿಂಗ್ ಗಳನ್ನು ಸ್ಮಾರಕ ವಾಗಿ ಉಳಿಸಿದ್ದಾರೆ.  ಇತರ ವಿಂಗ್ ಗಳನ್ನು  ಕೆಡವಿ  ಬೇರೆ  ಕಟ್ಟಡಗಳನ್ನು ನಿರ್ಮಿಸಲಾಗಿದೆ.
    
                          


ಒಬ್ಬರ ಮುಖ ಇನ್ನೊಬ್ಬರಿಗೆ ಕಾಣಿಸದಂತೆ ಕಟ್ಟಲಾದ 'ಸೆಲ್'ಗಳು, ಬಲವಾದ ಬೀಗಗಳು, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಹ ಪಹರೆ, ಅತಿ ಪರಿಶ್ರಮ ಬೇಡುವ ಗಾಣದ ಯಂತ್ರಕ್ಕೆ ಕತ್ತು ಒಡ್ಡುವ ಕೆಲಸ, ತೀರ ಕಳಪೆ, ಅತಿ ಕಡಿಮೆ ಆಹಾರ, ಕೆಲಸ ಮಾಡಲು ಅಸಾಧ್ಯವಾದಲ್ಲಿ  ಹೊಡೆತ, ಹೆಜ್ಜೆ ಹೆಜ್ಜೆಗೂ  ಅವಮಾನಕಾರಿಯಾದ  ಸನ್ನಿವೇಶ. ಒಂದು ವೇಳೆ ತಪ್ಪಿಸಿಕೊಂಡರೂ, ನಾಲ್ಕು ಕಡೆಯಲ್ಲೂ ಸಮುದ್ರ , ಹೋಗುವುದಾದರೂ ಹೇಗೆ? ತಪ್ಪಿಸಿಕೊಂಡ ಕೆಲವರನ್ನು  ಅಂಡಮಾನಿನ ಕಾಡುಗಳಲ್ಲಿದ್ದ ನರಭಕ್ಷಕ  ಆದಿವಾಸಿಗಳು ಕೊಂದರಂತೆ. ಸಿಕ್ಕಿಬಿದ್ದ  ಕೆಲವರನ್ನು ಬ್ರಿಟಿಷರು ಗಲ್ಲಿಗೆರಿಸಿದಂತೆ. 





ಇಂತಹ ಕಂಗೆಡಿಸುವ ವಾತಾವರಣದಲ್ಲೂ ಸ್ವಾತಂತ್ಯ್ರ ಯೋಧರ 'ವಂದೇ ಮಾತರಂ' ಎಂಬ ಕೆಚ್ಚಿನ ನುಡಿಗಳು ಕಳೆಗುಂದಲಿಲ್ಲ.
ಸುಮಾರು  ವರುಷಗಳನ್ನು ಅಂಡಮಾನಲ್ಲಿ ಕಳೆದ ವೀರ
ಸಾವರಕರ್ ಅವರ ದಿಟ್ಟನುಡಿಗಳು  ಇದಕ್ಕೆ ಸಾಕ್ಷಿ.  










ವೀರ ಸಾವರಕರ್ ಅವರ  ಸೆಲ್.







ಗಲ್ಲುಶಿಕ್ಷೆ ನಿಗದಿಯಾದವರು, ತಮ್ಮ ಅಂತಿಮ  ಸಂಸ್ಕಾರಗಳನ್ನು
ತಾವೇ ಮುಂಚಿತವಾಗಿ ಮಾಡಿ ನೇಣಿಗೆ ಸಿದ್ಧರಾಗುತಿದ್ದರಂತೆ.
ಇದಕ್ಕಾಗಿ ಜೈಲ್ ನ ಆವರಣದಲ್ಲಿ,
'ಫಾಸಿ ರೂಂ' ಪಕ್ಕದಲ್ಲಿ  ಒಂದು ಜಾಗವನ್ನು ನಿಗದಿಪಡಿಸಿದ್ದಾರೆ.


  
     



ಇಂತಹ ಯೋಧರ ಪರಿಶ್ರಮ, ತ್ಯಾಗ, ಬಲಿದಾನಗಳಿಂದಾಗಿ ಸಿಕ್ಕಿದ ಸ್ವಾತಂತ್ರ್ಯವನ್ನು ಆರಾಮವಾಗಿ ಅನುಭವಿಸುತ್ತಿರುವ ನಾವು, ಅವರ ಋಣವನ್ನು ಕಿಂಚಿತ್ತಾದರೂ ತೀರಿಸಲು ಅರ್ಹರೆ?

ಈ ಗುಂಗಿನಲ್ಲೇ  ಸೆಲ್ಯೂಲರ್ ಜೈಲ್ ನ ಆವರಣದಿಂದ  ಹೊರಬಂದಾಗ ನನಗೆ ಅನಿಸಿದ್ದು ಇಷ್ಟು : ಇನ್ನು  ಕಾಶಿ, ಪ್ರಯಾಗ ಇತ್ಯಾದಿ ಕ್ಷೇತ್ರಗಳಿಗೆ ಹೋಗದಿದ್ದರೂ ಅಡ್ಡಿಯಿಲ್ಲ, ಯಾಕೆಂದರೆ, ಅವಕ್ಕಿಂತಲೂ  ಶ್ರೇಷ್ಠವಾದ, ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಕ್ಷೇತ್ರವನ್ನು ಸಂದರ್ಶಿಸಿದೆನೆಂಬ ಧನ್ಯತಾ ಭಾವ ಸಿದ್ದಿಸಿತು.     

Tuesday, September 21, 2010

ಅಂಡಮಾನ್ ನ ಉದ್ಯಾನದಲ್ಲಿ ಒಂದು ಸುತ್ತು ....

ಕಳೆದ ವಾರ, ಅಂಡಮಾನ್ ನ ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಬಂದೆ.  ನಿಸರ್ಗದ ಸಿರಿಯಾಗಿರುವ ಅಂಡಮಾನ್ ನಲ್ಲಿ ಪ್ರಾಕೃತಿಕ ಸೌಂದರ್ಯ ಅದ್ವಿತೀಯ. ದಕ್ಷಿಣ ಅಂಡಮಾನ್ ನ 'ಜೈವಿಕ ತೋಟ'ವೊಂದರಲ್ಲಿ ಬೆಳೆಸಲಾಗಿದ್ದ  ಕೆಲವು ಗಿಡಗಳು ಹೀಗಿವೆ, ನೋಡಿ:

     

ಕೆಂಪು ಹೂವಿನ, ಕಾಯಿಗಳು ಸೂರ್ಯಾಭಿಮುಖವಾಗಿರುವ
ಈ ಬಾಳೆಕಾಯಿಗಳು, ನೋಡಲು ತುಂಬಾ ಆಕರ್ಷಕ, ತಿನ್ನಲು ಯೋಗ್ಯವೇ? ಗೊತ್ತಿಲ್ಲ!  









ಪಾಲಾಕ್ ಸೊಪ್ಪಿನಂತೆ  ಕಾಣುವ  ಈ ಸಸ್ಯವು "ಕೊತ್ತಂಬರಿ
ಸೊಪ್ಪಿನ "  ಪರಿಮಳವನ್ನು ಹೊಂದಿದೆ.   ಅಂಡಮಾನ್ ನಲ್ಲಿ   ಇದನ್ನು ಅಡುಗೆಗೆ ಬಳಸುತ್ತಾರೆ.       

 




"ದೊಡ್ಡ ಪತ್ರೆ"  ಎಲೆಗೆ ಬಿಳಿ  ಅಂಚು ?
ಹೀಗೆ, ಪಟ್ಟಿ ಮಾಡುತ್ತ ಹೋದರೆ ಇನ್ನಷ್ಟು , ಮತ್ತಷ್ಟು ಸಸ್ಯಸಂಕುಲದ  ಜೀವವೈವಿಧ್ಯ ವಿಸ್ಮಯ ಹುಟ್ಟಿಸುತ್ತದೆ. 

   

Friday, September 10, 2010

ನಾನು ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ!

ಜಾಗತೀಕರಣದ  ಈ ದಿನಗಳಲ್ಲಿ, ಉದ್ಯೋಗಸ್ಥ  ಮಹಿಳೆಯರು ಏಕಾಂಗಿಯಾಗಿ ವಿದೇಶ ಪ್ರಯಾಣ ಮಾಡುವುದು ತೀರಾ  ಸಾಮಾನ್ಯವಾದ  ವಿಷಯ.  ಕೆಲವು ಅಂತರ ರಾಷ್ಟ್ರೀಯ  ವಿಮಾನಗಳು ಬೆಂಗಳೂರಿನಿಂದ ತಡರಾತ್ರಿಯಲ್ಲಿ - ಅಂದರೆ 'ದೆವ್ವಗಳು' ಓಡಾಡುವ ಸಮಯದಲ್ಲಿ  ಆಕಾಶಕ್ಕೆ ಏರುತ್ತವೆ. ಅಂತರ ರಾಷ್ಟ್ರೀಯ ಪ್ರಯಾಣಿಕರು, ವಿಮಾನ ಹೊರಡುವುದಕ್ಕಿಂತ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣದಲ್ಲಿ  'ಚೆಕ್-ಇನ್' ಆಗಬೇಕು.

ಚೆಕ್ -ಇನ್ ಆದ ಮೇಲೆ ತಮ್ಮ ಸರದಿ ಬರುವ ವರೆಗೆ, ವಿಮಾನ ನಿಲ್ದಾಣದಲ್ಲಿ  ಕಾಲ ಕಳೆಯಲು ಹಲವಾರು ದಾರಿಗಳಿವೆ. ಅಲ್ಲಿರುವ ಶಾಪಿಂಗ್ ಕೇಂದ್ರಗಳಿಗೆ ನುಗ್ಗಿ ಬರುವುದು, ಪುಸ್ತಕ  ಓದುವುದು ಅಥವಾ ಪರಿಚಯದವರು ಸಿಕ್ಕಿದರೆ ಹರಟೆ ಹೊಡೆಯುವುದು, ಲ್ಯಾಪ್ ಟಾಪ್  ಬಿಡಿಸಿ ಆಫೀಸ್ ಕೆಲಸ ಮಾಡುವುದು -ಇವೆಲ್ಲವೂ  ಬೋರ್ ಆದರೆ ಸುಮ್ಮನೆ ತೂಕಡಿಸುತ್ತಾ ಕೂರುವುದು ....ಇತ್ಯಾದಿ.

ಕೆಲವು ದಿನಗಳ ಹಿಂದೆ ಹೀಗೆ  ನಡುರಾತ್ರಿಯಲ್ಲಿ ಬೆಂಗಳೂರಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೂಕಡಿಸುತ್ತಾ  ಕುಳಿತಿದ್ದೆ. ಮಧ್ಯವಯಸ್ಕ ಸಹ ಪ್ರಯಾಣಿಕರೊಬ್ಬರು ತಮ್ಮ ಪರಿಚಯ ಮಾಡಿಕೊಂಡರು.  ಅವರು  ಜರ್ಮನಿಯ  'ಫ್ರಾಂಕ್ ಫರ್ಟ್' ಗೆ ಹೋಗಿ ಅಲ್ಲಿಂದ 'ಯು.ಎಸ್'ಗೆ ಹೋಗುವವರು. ಅಲ್ಲಿ ಅವರ ಮಗ ಹಾಗು ಮಗಳು ನೆಲೆಸಿದ್ದಾರಂತೆ.

ನಾನು ನಮ್ಮ ಸಂಸ್ಥೆಯ ಮುಖ್ಯ ಆಫೀಸ್  ಇರುವ 'ಮ್ಯುನಿಕ್' ನಗರಕ್ಕೆ ಹೋಗಬೇಕಿತ್ತು.

ನನಗಿಂತ ಹಿರಿಯರಾಗಿದ್ದ ಅವರು ಕೇಳಿದ ಕೆಲವು ಪ್ರಶ್ನೆಗಳು ಹೀಗಿವೆ:

"ನೀನು  ಸಾಫ್ಟ್ ವೇರ್ ಇಂಜಿನಿಯರ್ ಇರಬೇಕಲ್ಲವೇ ?"
"ಅಮೆರಿಕಾಕ್ಕೆ  ಹೋಗಿಲ್ಲವಾ "
"ಮೈಸೂರಿನಲ್ಲಿ ಇನ್ಫೋಸಿಸ್ ನಲ್ಲಿ ಕೆಲಸವೇ"?
"ಆಗಾಗ್ಗೆ ಫಾರಿನ್ ಗೆ ಹೋಗುತ್ತೀಯ" ?

ಒಟ್ಟಿನಲ್ಲಿ ಪರದೇಶ ಎಂದರೆ ಅಮೆರಿಕ ಮಾತ್ರ, ಉದ್ಯೋಗ ಎಂದರೆ ಸಾಫ್ಟ್ ವೇರ್ ಇಂಜಿನಿಯರ್ ಎಂಬಂತಿತ್ತು, ಅವರ ಮಾತು.

ಮೇಲಿನ ಎಲ್ಲಾ ಪ್ರಶ್ನೆಗಳಿಗೆ ನನಗಿರುವುದು ಒಂದೇ ಉತ್ತರ - "ಅಲ್ಲ".

ನಾನು  ಸಾಫ್ಟ್ ವೇರ್ ಇಂಜಿನಿಯರ್ ಖಂಡಿತವಾಗಿಯೂ ಅಲ್ಲ. ನಾನು  ಬಿ.ಎಸ್ಸಿ.ಪದವೀಧರೆ, ಮೇಲೊಂದು ಕಂಪ್ಯೂಟರ್ ಕೋರ್ಸ್ ಮಾಡಿ,  ಇತ್ತೀಚೆಗೆ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಿಂದ  'ಎಂ.ಬಿ.ಎ' ಪದವಿ ಗಳಿಸಿದ್ದೇನೆ. ಕ್ಲೂಬರ್ ಲ್ಯೂಬ್ರಿಕೆಶನ್ ಇಂಡಿಯ  ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಲ್ಲಿ,'ಪ್ರೊಡಕ್ಶನ್ ಮ್ಯಾನೇಜರ್' ಆಗಿದ್ದೇನೆ.
ವೃತ್ತಿಗೆ ಸಂಬಂಧಿಸಿ  ಜರ್ಮನಿ, ಫ್ರಾನ್ಸ್,  ಬೆಲ್ಜಿಯಮ್,  ಸಿಂಗಾಪುರ್, ಥೈಲ್ಯಾಂಡ್, ಶ್ರೀಲಂಕಾ  ದೇಶಗಳಿಗೆ ಹೋಗಿದ್ದೇನೆ, ಆದರೆ ಅಮೆರಿಕಾಕ್ಕೆ ಈವರೆಗೆ ಹೋಗಿಲ್ಲ - ಅಂದು ತುಸು ಅಭಿಮಾನದಿಂದಲೇ ಹೇಳಿದೆ.

ಸುಮಾರು ಮಧ್ಯವಯಸ್ಸಿನವರಾದ  ಆಕೆ ನನ್ನನ್ನು , ' ಇವಳು ಸುಳ್ಳು  ಹೇಳುತ್ತಿರಬೇಕು ಎಂಬಂತೆ... ತುಸು ಅನುಮಾನದಿಂದ  ನೋಡಿದಂತೆ' ನನಗೆ ಭಾಸವಾಯಿತು.  ಬಹುಶ: ಅವರು ಅಂದುಕೊಂಡಿದ್ದ ಯಾವುದೇ ಅರ್ಹತೆಗಳು  ಇಲ್ಲದ ನಾನು  ವಿದೇಶಕ್ಕೆ  ಹೋಗುವ ಕಾರಣವಾದರು ಏನೆಂದು ತಿಳಿಯುವ ಕುತೂಹಲವಿದ್ದಿರಬೇಕು.  

"ಪ್ರಾಜೆಕ್ಟ್ ಮೇಲೆ ಹೋಗುತ್ತೀಯಾ.." ಅಂತ ಪುನಃ ಪ್ರಶ್ನಿಸಿದರು. " ಕಾಂಫೆರೆನ್ಸೆಗೆ " ಎಂದುತ್ತರಿಸಿದೆ.

ಆಕೆ ತಮ್ಮ ಮುಗ್ದತೆಯಿಂದ ಪ್ರಶ್ನಿಸಿದ್ದು ಎಂದು ಭಾವಿಸಬಹುದಾದರೂ ನನಗೆ ಸ್ವಲ್ಪ ಅವಮಾನವಾದಂತಾಯಿತು.

ಕೆಲವು ವರ್ಷಗಳ ಹಿಂದೆ ಕನ್ನಡ ಧಾರವಾಹಿಯೊಂದರ ಹಾಡು ಹೀಗಿತ್ತು:

"ದಂಡಪಿಂಡಗಳು... ಇವರು ದಂಡಪಿಂಡಗಳು..... ಬಿ ಎ,  ಬಿ ಎಸ್ಸಿ , ಬಿ ಕಾಂ  ಮಾಡಿ.. ಕೆಲಸ ಸಿಗದೇ ದಿನ ಅಲೆದಾಡಿ... "  ಯಾಕೋ ಈ ಹಾಡು ನೆನಪಿಗೆ ಬಂತು.

ಕಾರ್ಪೋರೇಟ್  ವಲಯದಲ್ಲಿ ಸುಮಾರು  ಹದಿನಾರು ವರುಷಗಳಿಂದ ದುಡಿಯುತ್ತಿರುವ ನನ್ನ ಅನುಭವದಲ್ಲಿ,   ಉದ್ಯೋಗ  ಮಾರುಕಟ್ಟೆಯಲ್ಲಿ ಯಶಸ್ಸು ಪಡೆಯಲು  ಹಲವಾರು ದಾರಿಗಳಿವೆ.  'ಸಾಫ್ಟ್ ವೇರ್ ಇಂಜಿನಿಯರ್' ಆಗುವುದು , ಅಂತಹ ಒಂದು ದಾರಿ ಅಷ್ಟೇ, ಆದರೆ  'ಅದೊಂದೇ ದಾರಿ' ಅಲ್ಲ. ಯಾರೇ ಆಗಲಿ 'ಸಾಫ್ಟ್ ವೇರ್ ಇಂಜಿನಿಯರ್' ಆಗದಿದ್ದರೆ  ಕೊರಗಬೇಕಾಗಿಲ್ಲ.  ಉತ್ತಮವಾದ ಉದ್ಯೋಗ ಸಾಧನೆಗೆ ಅವಕಾಶಗಳು ಸಾಕಷ್ಟಿವೆ. ಹಾಗಾಗಿ ಯಾವುದೇ ಒಂದು ಕ್ಷೇತ್ರಕ್ಕೆ ವಿಪರೀತ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ .

ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ " ನಾನು ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ"!

Tuesday, September 7, 2010

ಸಿಂಗಾಪುರದಲ್ಲಿ ಎಳನೀರು ಹೀಗಿತ್ತು

ಕಳೆದ ಏಪ್ರಿಲ್ ತಿಂಗಳ ಬಿಸಿಲಿನಲ್ಲಿ ಸಿಂಗಾಪುರದ  ಸೆಂಟುಸ  ದ್ವೀಪದಲ್ಲಿದ್ದೆ. ಎಳನೀರು ಮಾರುವ ಗಾಡಿಯೊಂದನ್ನು  ಕಂಡಾಗ ಕೊಳ್ಳೋಣವೆಂದು ಹತ್ತಿರ ಹೋದೆ. ಅಚ್ಚುಕಟ್ಟಾದ ಗಾಡಿಯಲ್ಲಿ,  ಮಂಜುಗಡ್ಡೆಯ ಮಧ್ಯೆ  ಇರಿಸಿದ ಎಳನೀರುಗಳು ಆಕರ್ಷಕವಾಗಿದ್ದುವು.




ದುಬಾರಿ ಎನಿಸಿದರೂ  ನಾಲಕ್ಕು ಸಿಂಗಾಪುರ್  ಡಾಲರ್  (ಸುಮಾರು  ನೂರಿಪ್ಪತ್ತು  ರುಪಾಯಿ) ತೆತ್ತು  ಒಂದು ಎಳನೀರು ಕೊಂಡು ಕೊಂಡೆ. 




ಎಳನೀರನ್ನು ಒಂದು ಪುಟ್ಟ ತಟ್ಟೆಯಲ್ಲಿ ಇರಿಸಿ,ಅದರ ಮೇಲೆ ಸಣ್ಣದಾದ
'ಛತ್ರಿ'ಯನ್ನು ಜೋಡಿಸಿದರು.
ಎಂಥ ಸುಂದರ ಜೋಡಣೆ!
ಪ್ರವಾಸಿಗಳನ್ನು ಸೆಳೆಯುವ ಮಾರ್ಕೆಟಿಂಗ್ ತಂತ್ರ!



 ಮೈಸೂರಿನಲ್ಲಿ  ಸೈಕಲ್ ಮೇಲೆ ಹೊರಲಾರದಷ್ಟು ಕಾಯಿಗಳನ್ನು ಹೇರಿಕೊಂಡು, ದಾರಿಯುದ್ದಕ್ಕೂ ಕೇಳಿದವರಿಗೆ ಎಳನೀರನ್ನು ಕೊಚ್ಚಿಕೊಟ್ಟು ಅದರ ಚಿಪ್ಪನ್ನು ಅಲ್ಲಲ್ಲೇ ಎಸೆದು ಹೋಗುವವರನ್ನು  ನೆನಪಾಯಿತು. 

ಯಾವುದೇ ದೇಶದಲ್ಲಿ , ಪ್ರವಾಸೋದ್ಯಮವನ್ನು ಬೆಳೆಸಲು ಸಣ್ಣ ಪುಟ್ಟ ವಿಚಾರಗಳಿಗೂ  ಪ್ರಾಮುಖ್ಯತೆ ನೀಡಿದರೆ ಮಾತ್ರ ಸಾಧ್ಯ ಅನಿಸಿತು.  

Friday, September 3, 2010

VISHALLA - A THEME RESTAURANT

Sometime back, we had been to Ahemdabad. During one of the days of our stay at Ahemdabad, we visited a theme restaurant called as’ Vishalla’. As a tourist, I was very much impressed with the unique arrangements the restaurant had and the way it introduces the rich ethnic culture of Gujarat.

Museum at Vishalla

This is located at approximately 10 km away from Ahmedabad. As we enter, series of ‘lanterns’ hung all over the area catches our attention. We were received by people wearing traditional Gujarati attire. They welcomed us with greeting as ‘behenji Hare ram’.

There is a museum exclusively for earthen pots (burtan museum) at Vishalla. This museum has a huge collection of various types of earthen pots ranging from 1 cm diameter up to may be 2 m! Various types of lamps, metal utensils, locks, traveler’s water jugs, toys collected from ancient ‘havelis’ were also displayed.




Dinner at Vishalla

Dinner at Vishalla was very nice and unique. There are many huts, exclusively for serving food. We could also see fresh food being cooked, inside some of the huts.

We were made to sit on the floor, on a mattress. Food was served on wooden slab placed at a height of one foot. The server brought a wide tray, in which there were many dishes placed in small bowls made out of leaves (Donne in Kannada). We should serve these items ourselves and pass the bowl to next person.

Like this we received series of ‘donne’ containing sprouts, chutneys, nuts, salads ….of various types. It was a very nice homely environment of an extended family, which is unheard in the modern era.

After serving more than 20 side dishes ourselves like this, on a robin round, it was the turn of main dishes. We were served with Bajra, Roti, kakra, Tepla, Patra, Kichdi, Sukdi, Kadi…….all vegetarian Gujarati dishes.

One person used to serve ‘chas’ (buttermilk), carried in an earthen pot, through out the dinner session. Each and every item was served to us with warmth addressing us as ‘behanji (sister)’ which I found very appealing.




At one corner a folk dance ‘Dandya’ was going on .This is quite similar to our ‘Kolata dance’ of Karnataka region, Some of us sat on hanging cots, made of jute and wires to while watching the dance.

As a part of developing tourism, many theme restaurants have emerged at various parts of the country. No doubt, such restaurants convey the rich culture of the region.