Total Pageviews

Friday, September 24, 2010

ಅಂಡಮಾನಿನ ಸೆಲ್ಯೂಲರ್ ಜೈಲ್ ...

ಅಂಡಮಾನಿಗೆ ಪ್ರವಾಸ   ಹೊರಟಿದ್ದೇನೆಂದು ಸಹೋದ್ಯೋಗಿಗಳೊಡನೆ ಹೇಳಿಕೊಂಡಾಗ  ಸಿಕ್ಕಿದ ಪ್ರತಿಕ್ರಿಯೆ ಹೀಗಿತ್ತು:
"ಅಲ್ಲಿ ಏನಿದೆ ಅಂತ ಹೋಗುತ್ತೀರ ? ಜೈಲ್ ನೋಡೋಕೆ ಅಷ್ಟು ಖರ್ಚು ಮಾಡಿಕೊಂಡು ಅಂಡಮಾನಿಗೆ ಹೋಗ್ಬೇಕಾ ? ಯಾಕೆ  ಮೈಸೂರಿನಲ್ಲಿ  ಜೈಲ್ ಇಲ್ವಾ?"  

ಕಳೆದ ವಾರ ಅಂಡಮಾನ್ ನ  ಸೆಲ್ಯೂಲರ್ ಜೈಲ್ ನ ಅಂಗಳದಲ್ಲಿ ಓಡಾಡಿದ್ದೆ. ಸ್ವಾತಂತ್ರ್ಯ ಪೂರ್ವದಲ್ಲಿ  'ಕಾಲಾಪಾನಿ' ಶಿಕ್ಷೆ ಗೆ ಗುರಿಯಾದವರನ್ನು ಅತ್ಯಂತ ಅಮಾನುಷವಾಗಿ ದಂಡಿಸಲೆಂದೇ ಕಟ್ಟಲಾದ ಈ ಜೈಲ್,  ಬ್ರಿಟಿಶ್ ಸರಕಾರದ ದಬ್ಬಾಳಿಕೆ  ಹಾಗು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ಕಷ್ಟ ಕೋಟಲೆಗಳಿಗೆ  ಸಾಕ್ಷಿಯಾಗಿ ನಿಂತಿದೆ.

ಈಗ ಸೆಲ್ಯೂಲರ್ ಜೈಲ್ ಒಂದು ರಾಷ್ಟ್ರೀಯ ಸ್ಮಾರಕ . ಜೈಲನ ಆವರಣದಲ್ಲಿ , ಪ್ರತಿದಿನ ಸಂಜೆಯ ಸಮಯ 'ಧ್ವನಿ -ಬೆಳಕು' ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಾರೆ. ತೀರಾ ಹೃದಯಸ್ಪರ್ಶಿಯಾದ ಈ ಕಾರ್ಯಕ್ರಮವನ್ನು ಆಲಿಸಿ-ವೀಕ್ಷಿಸಿ ಹೊರ ಬರುವಾಗ, ನಮ್ಮ ಸ್ವಾತಂತ್ಯ್ರ ಹೋರಾಟಗಾರರು  ಮಾಡಿದ ತ್ಯಾಗ, ಅನುಭವಿಸಿದ ಹಿಂಸೆ, ಕೆಲವರಿಗೆ ಗಲ್ಲುಶಿಕ್ಷೆ- ಅವರಿಗೆ ಆಗಿರಬಹುದಾದ  ಹಸಿವು, ನಿರಾಶೆ, ನೋವು, ಅಸೌಖ್ಯತೆ,  ಏಕಾಂಗಿತನ- ಇವಕ್ಕೆಲ್ಲ ಕಾರಣವಾದ ಬ್ರಿಟಿಶ್ ಸರಕಾರ - ಸೆಲ್ಯುಲರ್ ಕುಖ್ಯಾತ ಜೈಲರ್ ಡೇವಿಡ್ ಬಾರಿಯ  ಅಟ್ಟಹಾಸದ ನುಡಿಗಳು ..ಇವೆಲ್ಲ ಮನಸ್ಸಿಗೆ ತುಂಬಾ  ವೇದನೆಯನ್ನು  ಉಂಟುಮಾಡುತ್ತವೆ.


ಈತನ ಹಿಂಸೆ ತಡೆಯಲಾರದೆ  ಕೆಲವರು ಮಾನಸಿಕವಾಗಿ  ಅಸ್ವಸ್ಥರಾದರಂತೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡರಂತೆ. 




ಮಧ್ಯ ದಲ್ಲಿ ಒಂದು ಗೋಪುರವಿದ್ದು, ಚಕ್ರದ ಕಡ್ಡಿಗಳಂತೆ 
ನಿರ್ಮಿಸಲಾದ ಜೈಲ್ ನಲ್ಲಿ ಏಳು 'ವಿಂಗ್'ಗಳು ಇದ್ದವಂತೆ.
ಪ್ರತಿ ವಿಂಗ್ ನಲ್ಲಿ ೩ ಅಂತಸ್ತುಗಳಿವೆ.








ಒಂದು ವಿಂಗ್ ನ ಮುಂಭಾಗಕ್ಕೆ  ಮತ್ತೊಂದು ವಿಂಗ್ ನ ಹಿಂಭಾಗದ ಗೋಡೆ ಕಾಣಿಸುವಂತೆ ಕಟ್ಟಿದ್ದಾರೆ. ಪ್ರತಿ ಸೆಲ್ ನಲ್ಲೂ, ಸುಮಾರು ೧೦ ಅಡಿ ಎತ್ತರದಲ್ಲಿ ಗವಾಕ್ಷಿ ಇದೆ. ಹಾಗಾಗಿ, ಸೆಲ್ ನ ಒಳಗಿರುವ ವ್ಯಕ್ತಿ ಇತರರೊಡನೆ ಸಂಪರ್ಕ ಸಾಧಿಸಲು ಸಾಧ್ಯವೇ ಇಲ್ಲ.

ವೀರ ಸಾವರ್ಕರ್ ಅವರ ಸಹೋದರ ಕೂಡ ಇದೆ ಜೈಲ್ ನಲ್ಲಿ ಬಂಧಿಯಾಗಿ ಇದ್ದರೆಂಬ ವಿಚಾರ ಅವರಿಗೆ ಎರಡು ವರುಷಗಳ ಕಾಲ ಗೊತ್ತಿರಲಿಲ್ಲವಂತೆ!! 

ಈಗ ಕೇವಲ ಎರಡು ವಿಂಗ್ ಗಳನ್ನು ಸ್ಮಾರಕ ವಾಗಿ ಉಳಿಸಿದ್ದಾರೆ.  ಇತರ ವಿಂಗ್ ಗಳನ್ನು  ಕೆಡವಿ  ಬೇರೆ  ಕಟ್ಟಡಗಳನ್ನು ನಿರ್ಮಿಸಲಾಗಿದೆ.
    
                          


ಒಬ್ಬರ ಮುಖ ಇನ್ನೊಬ್ಬರಿಗೆ ಕಾಣಿಸದಂತೆ ಕಟ್ಟಲಾದ 'ಸೆಲ್'ಗಳು, ಬಲವಾದ ಬೀಗಗಳು, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಹ ಪಹರೆ, ಅತಿ ಪರಿಶ್ರಮ ಬೇಡುವ ಗಾಣದ ಯಂತ್ರಕ್ಕೆ ಕತ್ತು ಒಡ್ಡುವ ಕೆಲಸ, ತೀರ ಕಳಪೆ, ಅತಿ ಕಡಿಮೆ ಆಹಾರ, ಕೆಲಸ ಮಾಡಲು ಅಸಾಧ್ಯವಾದಲ್ಲಿ  ಹೊಡೆತ, ಹೆಜ್ಜೆ ಹೆಜ್ಜೆಗೂ  ಅವಮಾನಕಾರಿಯಾದ  ಸನ್ನಿವೇಶ. ಒಂದು ವೇಳೆ ತಪ್ಪಿಸಿಕೊಂಡರೂ, ನಾಲ್ಕು ಕಡೆಯಲ್ಲೂ ಸಮುದ್ರ , ಹೋಗುವುದಾದರೂ ಹೇಗೆ? ತಪ್ಪಿಸಿಕೊಂಡ ಕೆಲವರನ್ನು  ಅಂಡಮಾನಿನ ಕಾಡುಗಳಲ್ಲಿದ್ದ ನರಭಕ್ಷಕ  ಆದಿವಾಸಿಗಳು ಕೊಂದರಂತೆ. ಸಿಕ್ಕಿಬಿದ್ದ  ಕೆಲವರನ್ನು ಬ್ರಿಟಿಷರು ಗಲ್ಲಿಗೆರಿಸಿದಂತೆ. 





ಇಂತಹ ಕಂಗೆಡಿಸುವ ವಾತಾವರಣದಲ್ಲೂ ಸ್ವಾತಂತ್ಯ್ರ ಯೋಧರ 'ವಂದೇ ಮಾತರಂ' ಎಂಬ ಕೆಚ್ಚಿನ ನುಡಿಗಳು ಕಳೆಗುಂದಲಿಲ್ಲ.
ಸುಮಾರು  ವರುಷಗಳನ್ನು ಅಂಡಮಾನಲ್ಲಿ ಕಳೆದ ವೀರ
ಸಾವರಕರ್ ಅವರ ದಿಟ್ಟನುಡಿಗಳು  ಇದಕ್ಕೆ ಸಾಕ್ಷಿ.  










ವೀರ ಸಾವರಕರ್ ಅವರ  ಸೆಲ್.







ಗಲ್ಲುಶಿಕ್ಷೆ ನಿಗದಿಯಾದವರು, ತಮ್ಮ ಅಂತಿಮ  ಸಂಸ್ಕಾರಗಳನ್ನು
ತಾವೇ ಮುಂಚಿತವಾಗಿ ಮಾಡಿ ನೇಣಿಗೆ ಸಿದ್ಧರಾಗುತಿದ್ದರಂತೆ.
ಇದಕ್ಕಾಗಿ ಜೈಲ್ ನ ಆವರಣದಲ್ಲಿ,
'ಫಾಸಿ ರೂಂ' ಪಕ್ಕದಲ್ಲಿ  ಒಂದು ಜಾಗವನ್ನು ನಿಗದಿಪಡಿಸಿದ್ದಾರೆ.


  
     



ಇಂತಹ ಯೋಧರ ಪರಿಶ್ರಮ, ತ್ಯಾಗ, ಬಲಿದಾನಗಳಿಂದಾಗಿ ಸಿಕ್ಕಿದ ಸ್ವಾತಂತ್ರ್ಯವನ್ನು ಆರಾಮವಾಗಿ ಅನುಭವಿಸುತ್ತಿರುವ ನಾವು, ಅವರ ಋಣವನ್ನು ಕಿಂಚಿತ್ತಾದರೂ ತೀರಿಸಲು ಅರ್ಹರೆ?

ಈ ಗುಂಗಿನಲ್ಲೇ  ಸೆಲ್ಯೂಲರ್ ಜೈಲ್ ನ ಆವರಣದಿಂದ  ಹೊರಬಂದಾಗ ನನಗೆ ಅನಿಸಿದ್ದು ಇಷ್ಟು : ಇನ್ನು  ಕಾಶಿ, ಪ್ರಯಾಗ ಇತ್ಯಾದಿ ಕ್ಷೇತ್ರಗಳಿಗೆ ಹೋಗದಿದ್ದರೂ ಅಡ್ಡಿಯಿಲ್ಲ, ಯಾಕೆಂದರೆ, ಅವಕ್ಕಿಂತಲೂ  ಶ್ರೇಷ್ಠವಾದ, ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಕ್ಷೇತ್ರವನ್ನು ಸಂದರ್ಶಿಸಿದೆನೆಂಬ ಧನ್ಯತಾ ಭಾವ ಸಿದ್ದಿಸಿತು.     

Tuesday, September 21, 2010

ಅಂಡಮಾನ್ ನ ಉದ್ಯಾನದಲ್ಲಿ ಒಂದು ಸುತ್ತು ....

ಕಳೆದ ವಾರ, ಅಂಡಮಾನ್ ನ ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಬಂದೆ.  ನಿಸರ್ಗದ ಸಿರಿಯಾಗಿರುವ ಅಂಡಮಾನ್ ನಲ್ಲಿ ಪ್ರಾಕೃತಿಕ ಸೌಂದರ್ಯ ಅದ್ವಿತೀಯ. ದಕ್ಷಿಣ ಅಂಡಮಾನ್ ನ 'ಜೈವಿಕ ತೋಟ'ವೊಂದರಲ್ಲಿ ಬೆಳೆಸಲಾಗಿದ್ದ  ಕೆಲವು ಗಿಡಗಳು ಹೀಗಿವೆ, ನೋಡಿ:

     

ಕೆಂಪು ಹೂವಿನ, ಕಾಯಿಗಳು ಸೂರ್ಯಾಭಿಮುಖವಾಗಿರುವ
ಈ ಬಾಳೆಕಾಯಿಗಳು, ನೋಡಲು ತುಂಬಾ ಆಕರ್ಷಕ, ತಿನ್ನಲು ಯೋಗ್ಯವೇ? ಗೊತ್ತಿಲ್ಲ!  









ಪಾಲಾಕ್ ಸೊಪ್ಪಿನಂತೆ  ಕಾಣುವ  ಈ ಸಸ್ಯವು "ಕೊತ್ತಂಬರಿ
ಸೊಪ್ಪಿನ "  ಪರಿಮಳವನ್ನು ಹೊಂದಿದೆ.   ಅಂಡಮಾನ್ ನಲ್ಲಿ   ಇದನ್ನು ಅಡುಗೆಗೆ ಬಳಸುತ್ತಾರೆ.       

 




"ದೊಡ್ಡ ಪತ್ರೆ"  ಎಲೆಗೆ ಬಿಳಿ  ಅಂಚು ?
ಹೀಗೆ, ಪಟ್ಟಿ ಮಾಡುತ್ತ ಹೋದರೆ ಇನ್ನಷ್ಟು , ಮತ್ತಷ್ಟು ಸಸ್ಯಸಂಕುಲದ  ಜೀವವೈವಿಧ್ಯ ವಿಸ್ಮಯ ಹುಟ್ಟಿಸುತ್ತದೆ. 

   

Friday, September 10, 2010

ನಾನು ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ!

ಜಾಗತೀಕರಣದ  ಈ ದಿನಗಳಲ್ಲಿ, ಉದ್ಯೋಗಸ್ಥ  ಮಹಿಳೆಯರು ಏಕಾಂಗಿಯಾಗಿ ವಿದೇಶ ಪ್ರಯಾಣ ಮಾಡುವುದು ತೀರಾ  ಸಾಮಾನ್ಯವಾದ  ವಿಷಯ.  ಕೆಲವು ಅಂತರ ರಾಷ್ಟ್ರೀಯ  ವಿಮಾನಗಳು ಬೆಂಗಳೂರಿನಿಂದ ತಡರಾತ್ರಿಯಲ್ಲಿ - ಅಂದರೆ 'ದೆವ್ವಗಳು' ಓಡಾಡುವ ಸಮಯದಲ್ಲಿ  ಆಕಾಶಕ್ಕೆ ಏರುತ್ತವೆ. ಅಂತರ ರಾಷ್ಟ್ರೀಯ ಪ್ರಯಾಣಿಕರು, ವಿಮಾನ ಹೊರಡುವುದಕ್ಕಿಂತ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣದಲ್ಲಿ  'ಚೆಕ್-ಇನ್' ಆಗಬೇಕು.

ಚೆಕ್ -ಇನ್ ಆದ ಮೇಲೆ ತಮ್ಮ ಸರದಿ ಬರುವ ವರೆಗೆ, ವಿಮಾನ ನಿಲ್ದಾಣದಲ್ಲಿ  ಕಾಲ ಕಳೆಯಲು ಹಲವಾರು ದಾರಿಗಳಿವೆ. ಅಲ್ಲಿರುವ ಶಾಪಿಂಗ್ ಕೇಂದ್ರಗಳಿಗೆ ನುಗ್ಗಿ ಬರುವುದು, ಪುಸ್ತಕ  ಓದುವುದು ಅಥವಾ ಪರಿಚಯದವರು ಸಿಕ್ಕಿದರೆ ಹರಟೆ ಹೊಡೆಯುವುದು, ಲ್ಯಾಪ್ ಟಾಪ್  ಬಿಡಿಸಿ ಆಫೀಸ್ ಕೆಲಸ ಮಾಡುವುದು -ಇವೆಲ್ಲವೂ  ಬೋರ್ ಆದರೆ ಸುಮ್ಮನೆ ತೂಕಡಿಸುತ್ತಾ ಕೂರುವುದು ....ಇತ್ಯಾದಿ.

ಕೆಲವು ದಿನಗಳ ಹಿಂದೆ ಹೀಗೆ  ನಡುರಾತ್ರಿಯಲ್ಲಿ ಬೆಂಗಳೂರಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೂಕಡಿಸುತ್ತಾ  ಕುಳಿತಿದ್ದೆ. ಮಧ್ಯವಯಸ್ಕ ಸಹ ಪ್ರಯಾಣಿಕರೊಬ್ಬರು ತಮ್ಮ ಪರಿಚಯ ಮಾಡಿಕೊಂಡರು.  ಅವರು  ಜರ್ಮನಿಯ  'ಫ್ರಾಂಕ್ ಫರ್ಟ್' ಗೆ ಹೋಗಿ ಅಲ್ಲಿಂದ 'ಯು.ಎಸ್'ಗೆ ಹೋಗುವವರು. ಅಲ್ಲಿ ಅವರ ಮಗ ಹಾಗು ಮಗಳು ನೆಲೆಸಿದ್ದಾರಂತೆ.

ನಾನು ನಮ್ಮ ಸಂಸ್ಥೆಯ ಮುಖ್ಯ ಆಫೀಸ್  ಇರುವ 'ಮ್ಯುನಿಕ್' ನಗರಕ್ಕೆ ಹೋಗಬೇಕಿತ್ತು.

ನನಗಿಂತ ಹಿರಿಯರಾಗಿದ್ದ ಅವರು ಕೇಳಿದ ಕೆಲವು ಪ್ರಶ್ನೆಗಳು ಹೀಗಿವೆ:

"ನೀನು  ಸಾಫ್ಟ್ ವೇರ್ ಇಂಜಿನಿಯರ್ ಇರಬೇಕಲ್ಲವೇ ?"
"ಅಮೆರಿಕಾಕ್ಕೆ  ಹೋಗಿಲ್ಲವಾ "
"ಮೈಸೂರಿನಲ್ಲಿ ಇನ್ಫೋಸಿಸ್ ನಲ್ಲಿ ಕೆಲಸವೇ"?
"ಆಗಾಗ್ಗೆ ಫಾರಿನ್ ಗೆ ಹೋಗುತ್ತೀಯ" ?

ಒಟ್ಟಿನಲ್ಲಿ ಪರದೇಶ ಎಂದರೆ ಅಮೆರಿಕ ಮಾತ್ರ, ಉದ್ಯೋಗ ಎಂದರೆ ಸಾಫ್ಟ್ ವೇರ್ ಇಂಜಿನಿಯರ್ ಎಂಬಂತಿತ್ತು, ಅವರ ಮಾತು.

ಮೇಲಿನ ಎಲ್ಲಾ ಪ್ರಶ್ನೆಗಳಿಗೆ ನನಗಿರುವುದು ಒಂದೇ ಉತ್ತರ - "ಅಲ್ಲ".

ನಾನು  ಸಾಫ್ಟ್ ವೇರ್ ಇಂಜಿನಿಯರ್ ಖಂಡಿತವಾಗಿಯೂ ಅಲ್ಲ. ನಾನು  ಬಿ.ಎಸ್ಸಿ.ಪದವೀಧರೆ, ಮೇಲೊಂದು ಕಂಪ್ಯೂಟರ್ ಕೋರ್ಸ್ ಮಾಡಿ,  ಇತ್ತೀಚೆಗೆ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಿಂದ  'ಎಂ.ಬಿ.ಎ' ಪದವಿ ಗಳಿಸಿದ್ದೇನೆ. ಕ್ಲೂಬರ್ ಲ್ಯೂಬ್ರಿಕೆಶನ್ ಇಂಡಿಯ  ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಲ್ಲಿ,'ಪ್ರೊಡಕ್ಶನ್ ಮ್ಯಾನೇಜರ್' ಆಗಿದ್ದೇನೆ.
ವೃತ್ತಿಗೆ ಸಂಬಂಧಿಸಿ  ಜರ್ಮನಿ, ಫ್ರಾನ್ಸ್,  ಬೆಲ್ಜಿಯಮ್,  ಸಿಂಗಾಪುರ್, ಥೈಲ್ಯಾಂಡ್, ಶ್ರೀಲಂಕಾ  ದೇಶಗಳಿಗೆ ಹೋಗಿದ್ದೇನೆ, ಆದರೆ ಅಮೆರಿಕಾಕ್ಕೆ ಈವರೆಗೆ ಹೋಗಿಲ್ಲ - ಅಂದು ತುಸು ಅಭಿಮಾನದಿಂದಲೇ ಹೇಳಿದೆ.

ಸುಮಾರು ಮಧ್ಯವಯಸ್ಸಿನವರಾದ  ಆಕೆ ನನ್ನನ್ನು , ' ಇವಳು ಸುಳ್ಳು  ಹೇಳುತ್ತಿರಬೇಕು ಎಂಬಂತೆ... ತುಸು ಅನುಮಾನದಿಂದ  ನೋಡಿದಂತೆ' ನನಗೆ ಭಾಸವಾಯಿತು.  ಬಹುಶ: ಅವರು ಅಂದುಕೊಂಡಿದ್ದ ಯಾವುದೇ ಅರ್ಹತೆಗಳು  ಇಲ್ಲದ ನಾನು  ವಿದೇಶಕ್ಕೆ  ಹೋಗುವ ಕಾರಣವಾದರು ಏನೆಂದು ತಿಳಿಯುವ ಕುತೂಹಲವಿದ್ದಿರಬೇಕು.  

"ಪ್ರಾಜೆಕ್ಟ್ ಮೇಲೆ ಹೋಗುತ್ತೀಯಾ.." ಅಂತ ಪುನಃ ಪ್ರಶ್ನಿಸಿದರು. " ಕಾಂಫೆರೆನ್ಸೆಗೆ " ಎಂದುತ್ತರಿಸಿದೆ.

ಆಕೆ ತಮ್ಮ ಮುಗ್ದತೆಯಿಂದ ಪ್ರಶ್ನಿಸಿದ್ದು ಎಂದು ಭಾವಿಸಬಹುದಾದರೂ ನನಗೆ ಸ್ವಲ್ಪ ಅವಮಾನವಾದಂತಾಯಿತು.

ಕೆಲವು ವರ್ಷಗಳ ಹಿಂದೆ ಕನ್ನಡ ಧಾರವಾಹಿಯೊಂದರ ಹಾಡು ಹೀಗಿತ್ತು:

"ದಂಡಪಿಂಡಗಳು... ಇವರು ದಂಡಪಿಂಡಗಳು..... ಬಿ ಎ,  ಬಿ ಎಸ್ಸಿ , ಬಿ ಕಾಂ  ಮಾಡಿ.. ಕೆಲಸ ಸಿಗದೇ ದಿನ ಅಲೆದಾಡಿ... "  ಯಾಕೋ ಈ ಹಾಡು ನೆನಪಿಗೆ ಬಂತು.

ಕಾರ್ಪೋರೇಟ್  ವಲಯದಲ್ಲಿ ಸುಮಾರು  ಹದಿನಾರು ವರುಷಗಳಿಂದ ದುಡಿಯುತ್ತಿರುವ ನನ್ನ ಅನುಭವದಲ್ಲಿ,   ಉದ್ಯೋಗ  ಮಾರುಕಟ್ಟೆಯಲ್ಲಿ ಯಶಸ್ಸು ಪಡೆಯಲು  ಹಲವಾರು ದಾರಿಗಳಿವೆ.  'ಸಾಫ್ಟ್ ವೇರ್ ಇಂಜಿನಿಯರ್' ಆಗುವುದು , ಅಂತಹ ಒಂದು ದಾರಿ ಅಷ್ಟೇ, ಆದರೆ  'ಅದೊಂದೇ ದಾರಿ' ಅಲ್ಲ. ಯಾರೇ ಆಗಲಿ 'ಸಾಫ್ಟ್ ವೇರ್ ಇಂಜಿನಿಯರ್' ಆಗದಿದ್ದರೆ  ಕೊರಗಬೇಕಾಗಿಲ್ಲ.  ಉತ್ತಮವಾದ ಉದ್ಯೋಗ ಸಾಧನೆಗೆ ಅವಕಾಶಗಳು ಸಾಕಷ್ಟಿವೆ. ಹಾಗಾಗಿ ಯಾವುದೇ ಒಂದು ಕ್ಷೇತ್ರಕ್ಕೆ ವಿಪರೀತ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ .

ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ " ನಾನು ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ"!

Tuesday, September 7, 2010

ಸಿಂಗಾಪುರದಲ್ಲಿ ಎಳನೀರು ಹೀಗಿತ್ತು

ಕಳೆದ ಏಪ್ರಿಲ್ ತಿಂಗಳ ಬಿಸಿಲಿನಲ್ಲಿ ಸಿಂಗಾಪುರದ  ಸೆಂಟುಸ  ದ್ವೀಪದಲ್ಲಿದ್ದೆ. ಎಳನೀರು ಮಾರುವ ಗಾಡಿಯೊಂದನ್ನು  ಕಂಡಾಗ ಕೊಳ್ಳೋಣವೆಂದು ಹತ್ತಿರ ಹೋದೆ. ಅಚ್ಚುಕಟ್ಟಾದ ಗಾಡಿಯಲ್ಲಿ,  ಮಂಜುಗಡ್ಡೆಯ ಮಧ್ಯೆ  ಇರಿಸಿದ ಎಳನೀರುಗಳು ಆಕರ್ಷಕವಾಗಿದ್ದುವು.




ದುಬಾರಿ ಎನಿಸಿದರೂ  ನಾಲಕ್ಕು ಸಿಂಗಾಪುರ್  ಡಾಲರ್  (ಸುಮಾರು  ನೂರಿಪ್ಪತ್ತು  ರುಪಾಯಿ) ತೆತ್ತು  ಒಂದು ಎಳನೀರು ಕೊಂಡು ಕೊಂಡೆ. 




ಎಳನೀರನ್ನು ಒಂದು ಪುಟ್ಟ ತಟ್ಟೆಯಲ್ಲಿ ಇರಿಸಿ,ಅದರ ಮೇಲೆ ಸಣ್ಣದಾದ
'ಛತ್ರಿ'ಯನ್ನು ಜೋಡಿಸಿದರು.
ಎಂಥ ಸುಂದರ ಜೋಡಣೆ!
ಪ್ರವಾಸಿಗಳನ್ನು ಸೆಳೆಯುವ ಮಾರ್ಕೆಟಿಂಗ್ ತಂತ್ರ!



 ಮೈಸೂರಿನಲ್ಲಿ  ಸೈಕಲ್ ಮೇಲೆ ಹೊರಲಾರದಷ್ಟು ಕಾಯಿಗಳನ್ನು ಹೇರಿಕೊಂಡು, ದಾರಿಯುದ್ದಕ್ಕೂ ಕೇಳಿದವರಿಗೆ ಎಳನೀರನ್ನು ಕೊಚ್ಚಿಕೊಟ್ಟು ಅದರ ಚಿಪ್ಪನ್ನು ಅಲ್ಲಲ್ಲೇ ಎಸೆದು ಹೋಗುವವರನ್ನು  ನೆನಪಾಯಿತು. 

ಯಾವುದೇ ದೇಶದಲ್ಲಿ , ಪ್ರವಾಸೋದ್ಯಮವನ್ನು ಬೆಳೆಸಲು ಸಣ್ಣ ಪುಟ್ಟ ವಿಚಾರಗಳಿಗೂ  ಪ್ರಾಮುಖ್ಯತೆ ನೀಡಿದರೆ ಮಾತ್ರ ಸಾಧ್ಯ ಅನಿಸಿತು.  

Friday, September 3, 2010

VISHALLA - A THEME RESTAURANT

Sometime back, we had been to Ahemdabad. During one of the days of our stay at Ahemdabad, we visited a theme restaurant called as’ Vishalla’. As a tourist, I was very much impressed with the unique arrangements the restaurant had and the way it introduces the rich ethnic culture of Gujarat.

Museum at Vishalla

This is located at approximately 10 km away from Ahmedabad. As we enter, series of ‘lanterns’ hung all over the area catches our attention. We were received by people wearing traditional Gujarati attire. They welcomed us with greeting as ‘behenji Hare ram’.

There is a museum exclusively for earthen pots (burtan museum) at Vishalla. This museum has a huge collection of various types of earthen pots ranging from 1 cm diameter up to may be 2 m! Various types of lamps, metal utensils, locks, traveler’s water jugs, toys collected from ancient ‘havelis’ were also displayed.




Dinner at Vishalla

Dinner at Vishalla was very nice and unique. There are many huts, exclusively for serving food. We could also see fresh food being cooked, inside some of the huts.

We were made to sit on the floor, on a mattress. Food was served on wooden slab placed at a height of one foot. The server brought a wide tray, in which there were many dishes placed in small bowls made out of leaves (Donne in Kannada). We should serve these items ourselves and pass the bowl to next person.

Like this we received series of ‘donne’ containing sprouts, chutneys, nuts, salads ….of various types. It was a very nice homely environment of an extended family, which is unheard in the modern era.

After serving more than 20 side dishes ourselves like this, on a robin round, it was the turn of main dishes. We were served with Bajra, Roti, kakra, Tepla, Patra, Kichdi, Sukdi, Kadi…….all vegetarian Gujarati dishes.

One person used to serve ‘chas’ (buttermilk), carried in an earthen pot, through out the dinner session. Each and every item was served to us with warmth addressing us as ‘behanji (sister)’ which I found very appealing.




At one corner a folk dance ‘Dandya’ was going on .This is quite similar to our ‘Kolata dance’ of Karnataka region, Some of us sat on hanging cots, made of jute and wires to while watching the dance.

As a part of developing tourism, many theme restaurants have emerged at various parts of the country. No doubt, such restaurants convey the rich culture of the region.