Total Pageviews

Wednesday, November 19, 2014

ನೀರಿನಿಂದ ಮೇಲೆದ್ದ ವೇಣುಗೋಪಾಲಸ್ವಾಮಿ


Share Button

ಮೈಸೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ‘ಹೊಸಕನ್ನಂಬಾಡಿ’ ಎಂಬ ಊರು ಕೃಷ್ಣರಾಜ ಸಾಗರ (ಕೆ.ಆರ್.ಎಸ್) ಅಣೆಕಟ್ಟಿನ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಿದೆ. ಅಣೆಕಟ್ಟನ್ನು ಕಟ್ಟಿದಾಗ ಮುಳುಗಡೆಯಾಗಿದ್ದ ವೇಣುಗೋಪಾಲಸ್ವಾಮಿ ದೇವಾಲಯನ್ನು ನೀರಿನಿಂದ ಮೇಲೆತ್ತಿ, ಯಥಾವತ್ತಾಗಿ ಪುನರ್ನಿಮಾಣಗೊಳಿಸುವ ಕಾರ್ಯ ಅಲ್ಲಿ ಭರದಿಂದ ನಡೆಯುತ್ತಿದೆ. ಈ ಪರಿಸರವು ತುಂಬಾ ಚೆನ್ನಾಗಿದೆ. 


Hosa kannambadi temple1
Hosa kannambadi Venugopal temple

ಕೆ.ಆರ್.ಎಸ್ ನ ಬೃಂದಾವನಕ್ಕೆ ಹೊಗುವ ದಾರಿಯಲ್ಲಿ ಮುಂದಕ್ಕೆ ಪ್ರಯಾಣಿಸಿದಾಗ ‘ಬಸ್ತಿಹಳ್ಳಿ’ ಸಿಗುತ್ತದೆ. ಅಲ್ಲಿಂದ ಸುಮಾರು 3 ಕಿ.ಮಿ ಮುಂದೆ ಹೋಗುವಷ್ಟರಲ್ಲಿ ‘ಹೊಸಕನ್ನಂಬಾಡಿ’ ಸಿಗುತ್ತದೆ. ಅಲ್ಲಿ ಈ ದೇವಸ್ಥಾನ ಇರುವುದು.


- ಸುರಗಿ

No comments:

Post a Comment